ಬಿ.ಪುಟ್ಟಸ್ವಾಮಯ್ಯರವರ
ಆರು ಕಾದಂಬರಿಗಳು
ಬಿ.ಪುಟ್ಟಸ್ವಾಮಯ್ಯರವರು
ಬಸವಣ್ಣನವರನ್ನು ಕೇಂದ್ರವಾಗಿಟ್ಟುಕೊಂಡು ಹನ್ನೆರಡನೆಯ ಶತಮಾನದ ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ
ಹಾಗೂ ಸಾಹಿತ್ಯಿಕ ಚಟುವಟಿಕೆಗಳಿಗೆ ತಮ್ಮ ಕಲ್ಪನೆಯ ರಂಗು ತುಂಬಿ
ಉದಯರವಿ(1959)
ರಾಜ್ಯಪಾಲ
(1960)
ಕಲ್ಯಾಣೇಶ್ವರ(1960)
ನಾಗಬಂಧ(1962)
ಮುಗಿಯದ
ಕನಸು(1962)
ಕ್ರಾಂತಿಕಲ್ಯಾಣ(1963)
ತಮ್ಮ
ಕಲ್ಪನೆಯ ಪಾತ್ರಗಳು ವಾಸ್ತವವೆನ್ನುವಷ್ಟರಮಟ್ಟಿಗೆ ಆ ಕಾಲದ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸಾಹಿತ್ಯಿಕ
ಗುಣವನ್ನು ಕಟ್ಟಿಕೊಡುತ್ತವೆ.
ಆರು
ಕಾದಂಬರಿಗಳ ಬಗ್ಗೆ ರಾಷ್ಟ್ರಕವಿ ಕುವೆಂಪುರವರ ನುಡಿಗಳು
12ನೆಯ
ಶತಮಾನದಲ್ಲಿ ಜಾತಿವಿನಾಶ ಮಾಡಬೇಕೆಂದು ಹೇಳಿ ಬಸವೇಶ್ವರರು ಜಗತ್ತಿನಲ್ಲಿ ಯಾರೂ ಮಾಡದ ಪ್ರಯತ್ನ ಪ್ರಾರಂಭ
ಮಾಡಿದರು. ಈ ಪುರೋಹಿತಶಾಹಿಗಳು ಅದನ್ನು ಕೂಡಾ ಹಿಮ್ಮೆಟ್ಟಿಸಿದರು. ಪುಟ್ಟಸ್ವಾಮಯ್ಯರವರು ಬರೆದಿರುವ
ಕ್ರಾಂತಿಕಲ್ಯಾಣದಲ್ಲಿ ಕೊನೆಗೊಂಡಿರುವ ಆರು ಕಾದಂಬರಿಗಳನ್ನು ನೀವು ಸರಿಯಾಗಿ ಓದಿದರೆ ಅಲ್ಲಿ ನಿಮಗೆ
ಗೊತ್ತಾಗುತ್ತದೆ. ಹೇಗೆ ಈ ಪುರೋಹಿತವರ್ಗ ಈ ಕ್ರಾಂತಿಗಳನ್ನು
ಹಿಮ್ಮೆಟ್ಟಿಸಿತು ಅಂತ. ಹೇಗೆ ತುಳಿಯಿತು? ಹೇಗೆ ಅನ್ಯಾಯ ಮಾಡಿತು? ಹೇಗೆ ಕೊಲೆ ಮಾಡಿತು? ಎಲ್ಲಾ ಮಾಡಿತು.
ಅವು ಗೊತ್ತಾಗುತ್ತದೆ.
ಬಿ.ಪುಟ್ಟಸ್ವಾಮಯ್ಯರವರ
ಕೊನೆಯ ಪುಸ್ತಕವನ್ನು ವಿವರವಾಗಿ ಪರಿಚಯಿಸುತ್ತಿರುವೆ.
ಕ್ರಾಂತಿಕಲ್ಯಾಣ ಪುಸ್ತಕ ಸುವರ್ಣ ಕರ್ನಾಟಕ ಆಚರಣೆಯ ಸಂದರ್ಭದಲ್ಲಿ
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವಿಶೇಷ ಯೋಜನೆಯಡಿಯಲ್ಲಿ ಖರೀದಿಸಿದ ಪುಸ್ತಕ
ಇದು
ಮಹಾಮಾನವತಾವಾದಿ ಶ್ರೀ ಬಸವೇಶ್ವರರ ಜೀವನ ಸಾಧನೆಗಳನ್ನು ಪರಿಚಯಿಸುವ ಕಾದಂಬರಿ ಮಾಲಿಕೆಯಲ್ಲಿ ಆರನೆಯದು.
ಮುನ್ನುಡಿಯನ್ನು
ಖ್ಯಾತ ಸಾಹಿತಿ ಮತ್ತು ವಿಮರ್ಶಕ ಎಸ್. ವಿದ್ಯಾಶಂಕರ್ ರವರು ಬರೆದಿದ್ದರೆ ಬೆನ್ನುಡಿಯನ್ನು ಪ್ರಥಮ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪುರವರು ಬರೆದಿದ್ದಾರೆ.
1965ರಲ್ಲಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಕೃತಿ ರಾಜಗೃಹದ ರಹಸ್ಯ, ಸಿರಿಮನೆಯ ಕತ್ತಲೆಗೆ ಗುರುಮನೆಯ
ದೀಪ, ಮಂಗಳವೇಡೆಯ ಅಗ್ನಿದಾಹ, ಮಾನವನು ದಾನವನಾದಾಗ, ರಾಜಗೃಹದಿಂದ ಹೊನ್ನಮ್ಮನ ಚಾವಡಿಗೆ, ಮಹಾಪ್ರಸ್ಥಾನ
ಎಂಬ ಆರು ಅಧ್ಯಾಯಗಳನ್ನು ಒಳಗೊಂಡಿದ್ದು, ಅಂತಿಮವಾಗಿ ಉಪಸಂಹಾರ ಹೊಂದಿರುತ್ತದೆ.
ಕಾದಂಬರಿಯಲ್ಲಿ
ಬರುವ ಎರಡು ಸಾಲು ಉಲ್ಲೇಖ
“ಜೀವಾತ್ಮ
ಪರಮಾತ್ಮರು ಒಂದೇ ಎಂಬ ಭಾವದಿಂದ ನೆನಪು ಅಳಿದಾಗ ನೆನೆ ಎಂದರೆ ನಾನು ಯಾರನ್ನು ನೆನೆಯಲಿ, ಅರಿಯಬೇಕಾದ
ವಸ್ತುವಾಗಲಿ, ಅರಿಯುವವನಾಗಲಿ ಇಲ್ಲದ್ದರಿಂದ ಈಗ ನನ್ನ ಕಾಯವೇ ಕೈಲಾಸ, ಮನಸ್ಸೇ ಲಿಂಗ, ತನುವೇ ಸಜ್ಜೆ,
ನೆನೆಯುವ ವಸ್ತುವಿಲ್ಲ, ನೆನೆಯುವ ಭಕ್ತನಿಲ್ಲ, ಆತ್ಮನಲ್ಲಿ ಬ್ರಹ್ಮವು, ಬ್ರಹ್ಮನಲ್ಲಿ ಆತ್ಮವು ಬೆರೆತು,
ಎರಡಾಗಿದ್ದು ಒಂದೇ ಆಯಿತು.
ಬೆಂಗಳೂರಿನ ಪ್ರಿಯದರ್ಶಿನಿ ಪ್ರಕಾಶನ ಹೊರತಂದಿರುವ ಆರು ಗಳ ಒಟ್ಟು ಬೆಲೆ ರೂ 1500
ಪುಸ್ತಕ ಬೇಕಾದರೆ ಕೆಳಗಿನ ನಂಬರ್
ಗೆ ವಾಟ್ಸ್ ಆ್ಯಪ್ ಮಾಡಿ ಪುಸ್ತಕ ತರಿಸಿಕೊಳ್ಳಬಹುದ
9980393469
ಪುಸ್ತಕ
ಪರಿಚಯಿಸುತ್ತಿರುವವರು
ಡಾ.
ವಚನ ಕುಮಾರಸ್ವಾಮಿ
ಸಂಸ್ಥಾಪಕರು
ಶರಣು
ವಿಶ್ವವಚನ ಫೌಂಡೇಷನ್, ಮೈಸೂರು


No comments:
Post a Comment