ಶಿವಶರಣೆಯರು
೧೨ ನೇ ಶತಮಾನ ಹೆಣ್ಣಿನ ಬಾಳಿನಲ್ಲಿ ಪುಣ್ಯೋದಯವಾದ ಕಾಲ, ಅಳುವ ಕಂಗಳಲ್ಲಿ ನಗೆಯ ಹೂ ಅರಳಿಸಿದ ಕಾಲ, ಹೆಣ್ಣ ಬಾಳ ಹೊನ್ನ ಬಾಳಾಗಿಸಿದ ಕಾಲ. ಇದಕ್ಕೆಲ್ಲ ಕಾರಣ ಅಣ್ಣ ಬಸವಣ್ಣ ತಮ್ಮ ಅನುಭವ ಮಂಟಪದಲ್ಲಿ ಮಹಿಳೆಯರು ಕೂಡ ವಿಚಾರ ವಿನಿಮಯ ಮಾಡಲು ಅವಕಾಶ ಕಲ್ಪಿಸಿದ್ದರಿಂದಾಗಿ ಪುರುಷರಿಗೆ ಸರಿಸಮಾನರಾಗಿ ಬದುಕು ಹಾಗೂ ಜ್ಞಾನ ಕಟ್ಟಿಕೊಳ್ಳಲು ಸಹಾಯಕವಾಯಿತು.
ರಾಜೇಂದ್ರ ಶಿಶು ಎಂಬ ಕಾವ್ಯನಾಮ ಹೊಂದಿರುವ ನಿವೃತ್ತ ಉಪನ್ಯಾಸಕರಾದ ಅಕ್ಕ ಎಂ. ಎ ನೀಲಾಂಬಿಕರವರು 38 ವಚನಕಾರ್ತಿಯರ ಪರಿಚಯ ಅವರು ರಚಿಸಿರುವ ವಚನಗಳು ಅವುಗಳ ಭಾವರ್ಥ ನೀಡುವುದರ ಜೊತೆಗೆ ಪ್ರತಿಯೊಬ್ಬ ವಚನಕಾರ್ತಿಯ ಜೀವನ ಚರಿತ್ರೆ ಯನ್ನು ಚಿತ್ರಿಸಿದ್ದಾರೆ ಜೊತೆಗೆ ವಚನಗಳನ್ನು ಬರೆಯದ ಒಂಭತ್ತು ಕಾಯಕ ನಿರತ ಶರಣೆಯರನ್ನು ಪರಿಚಯಿಸಿದ್ದಾರೆ.
228 ಪುಟಗಳನ್ನು ಹೊಂದಿರುವ ಈ ಕೃತಿಗೆ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾ ಸ್ವಾಮಿಗಳು ಶುಭ ಹಾರೈಕೆ ಮಾಡಿದ್ದು ದಾವಣಗೆರೆ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಎಸ್ ಇಂದುಮತಿರವರು ಮುನ್ನುಡಿ ಹಾಗೂ ಲೇಖಕ ನಗರ್ಲೆ ಶಿವಕುಮಾರ ಬೆನ್ನುಡಿ ಬರೆದಿರುತ್ತಾರೆ.
ಮೈಸೂರಿನ ಕದಳಿ ಮಹಿಳಾ ವೇದಿಕೆ ಹೊರತಂದಿರುವ ಈ ಪುಸ್ತಕದ ಮುಖಬೆಲೆ ರೂ 250.
ಪುಸ್ತಕ ಬೇಕಾದರೆ ಕೆಳಗಿನ ಮೊಬೈಲ್ ನಂಬರ್ ಗೆ ವಾಟ್ಸ್ ಆಪ್ ಮಾಡಿ
8217081644
ಪುಸ್ತಕ ಪರಿಚಯಿಸಿದವರು
ರೂಪಕುಮಾರಸ್ವಾಮಿ
ಸಂಸ್ಥಾಪಕರು
ಶರಣು ವಿಶ್ವವಚನ ಫೌಂಡೇಷನ್, ಮೈಸೂರು


No comments:
Post a Comment