ಶ್ರೀ ಸಿದ್ಧಗಂಗಾ
ಸಂಕ್ಷಿಪ್ತ ಪರಿಚಯ ಮತ್ತು ಶ್ರೀಗಳವರ ಸಾಧನೆಗಳು
ವಚನಗಳ ಪಂಜುಗಳು
ದಶದಿಕ್ಕು ಸಂಚರಿಸಿ
ಅಜ್ಞಾನ ಜನಮನಸ ಸುಜ್ಞಾನ
ಮಾರ್ಪಡಿಸಿ
ದೇವಮಾನವನಾಗಿ ಸಂಗನಲಿ
ಒಂದಾದೆ
ಮತ್ತೊಮ್ಮೆ ಹುಟ್ಟಿ
ಬಾ ಶರಣು ಬಸವಣ್ಣ
ಎಂದು ಪ್ರಾರಂಭವಾಗುವ
ಈ ಪುಸ್ತಕವು ಪೂಜ್ಯ ಡಾ. ಶ್ರೀ ಶಿವಕುಮಾರಮಹಾಸ್ವಾಮಿಗಳವರ ಸಂದೇಶ ಹೊಂದಿದ್ದು ಶ್ರೀ ಸಿದ್ಧಗಂಗಾ ಕ್ಷೇತ್ರದ ಸಂಕ್ಷಿಪ್ತ ಪರಿಚಯ ಒಳಗೊಂಡಿದೆ.
ಶ್ರೀ ಸಿದ್ಧಗಂಗಾ ಮಠದ ಗುರು ಪರಂಪರೆಯನ್ನು ಪರಿಚಯ ಮಾಡಿದ್ದು, ಶ್ರೀ ಶಿವಕುಮಾರಸ್ವಾಮಿಗಳವರ ದಿಟ್ಟ
ಹೆಜ್ಜೆಯ ಗುರುತುಗಳನ್ನು ಹೊಂದಿದ್ದು, ಕ್ಷೇತ್ರದ ಬಗ್ಗೆ ಅನೇಕ ಗಣ್ಯರ ಅನಿಸಿಕೆಗಳು ಕೂಡಾ ಇವೆ.ಪುಷ್ಪಾಮಜಲಿ
ಮತ್ತು ಜ್ಯೋತಿ ಬೆಳಗುತಿದೆ ಎಂಬ ಗೀತೆಯನ್ನು ಕೂಡಾ ಹೊಂದಿದೆ.
ರಾಜಶೇಖರಯ್ಯರವರು
ಬರೆದಿರುವ ಈ ಕೃತಿಯನ್ನು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಪುಸ್ತಕ ಮಳಿಗೆ ಹೊರತಂದಿದ್ದು,
88 ಪುಟಗಳನ್ನು ಹೊಂದಿದೆ. ಇದರ ಮುಖ ಬೆಲೆ ರೂ 60.
ಪುಸ್ತಕ ಬೇಕಾದರೆ ಕೆಳಕಂಡ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಿ.
9980393469
ಪುಸ್ತಕ ಪರಿಚಯಿಸುತ್ತಿರುವವರು
ಡಾ.
ವಚನ ಕುಮಾರಸ್ವಾಮಿ
ಸಂಸ್ಥಾಪಕರು
ಶರಣು
ವಿಶ್ವವಚನ ಫೌಂಡೇಷನ್, ಮೈಸೂರು


No comments:
Post a Comment