Wednesday, December 24, 2025

ಮೈಕೆಲ್

 ಯಾರೋ ಕೇಳಿದರು: ಒಲಂಪಿಕ್ಸ್‌ನಲ್ಲಿ ಇಷ್ಟೆಲ್ಲ ಪದಕ ಗೆದ್ದಿದ್ದೀರಿ ಹೇಗೆ? 

ಮೈಕೆಲ್‌ ಹೇಳಿದರು: ದಿನವೂ ಪ್ರ್ಯಾಕ್ಟೀಸ್‌ ಮಾಡುವುದರಿಂದ.  

ಪ್ರಶ್ನೆ ಕೇಳಿದವರು ಕೇಳಿದರು : ದಿನವೂ ಪ್ರಾಕ್ಟೀಸ್‌ ಮಾಡುವುದರಿಂದ ಅಂದರೆ?

ಮೈಕೆಲ್‌ ಫೆಲ್ಫ್ಸ್‌: ಅಂದರೆ ದಿನವೂ ಪ್ರ್ಯಾಕ್ಟೀಸ್‌ ಮಾಡುವುದರಿಂದ. 

ಸಂದರ್ಶಕ ಮತ್ತೆ ಕೇಳಿದ: ಅಂದರೆ ಬರೀ ದಿನವೂ ಪ್ರ್ಯಾಕ್ಟೀಸ್‌ ಮಾಡುವುದರಿಂದ? 

ಆಗ ಮೈಕೆಲ್‌ ಫೆಲ್ಫ್ಸ್‌ ಹೇಳುತ್ತಾರೆ: ನಾನು ಹೇಳುವುದು ನಿಮಗೆ ಅರ್ಥವಾಗುತ್ತಿಲ್ಲ. ಏಳುವರ್ಷಗಳ ಕಾಲ ದಿನವೂ ಪ್ರ್ಯಾಕ್ಟೀಸ್‌ ಮಾಡುವುದು. ಪ್ರತೀ ದಿನ, ಕ್ರಿಸ್‌ಮಸ್‌ ಇರಲಿ, ಥ್ಯಾಂಕ್ಸ್‌ ಗಿವಿಂಗ್‌ ಇರಲಿ, ಕಾರ್ಯಕ್ರಮ ಇರಲಿ, ಹೊಸ ವರ್ಷವಿರಲಿ ಪ್ರತೀ ದಿನ ಪ್ರ್ಯಾಕ್ಟೀಸ್.‌ ಚಳಿ, ಮಳೆ, ಸೆಕೆ, ಬಿಸಿಲು, ಪ್ರವಾಹ ಮತ್ತೊಂದು ಮಗದೊಂದು ಏನೇ ಇದ್ದರೂ ಪ್ರತೀ ದಿನ ಒಂದು ದಿನವೂ ಬಿಡದೇ ಪ್ರ್ಯಾಕ್ಟೀಸ್‌ . ಜ್ವರ ಬರಲಿ, ಶೀತವಾಗಲೀ ಪ್ರ್ಯಾಕ್ಟೀಸ್‌! ನನ್ನ ಬದುಕಿನ ಏಳು ವರ್ಷ ರೆಸ್ಟ್‌ ತಗೊಂಡಿದ್ದು ನೆನಪಿಲ್ಲ, ರಿಕವರಿ ಮಾಡಿಕೊಳ್ಳಲು ಆರಾಮಾಗಿ ಇದ್ದದ್ದು ನೆನಪಿಲ್ಲ, ಬರೀ ಪ್ರ್ಯಾಕ್ಟೀಸ್‌ ಅಷ್ಟೇ. 

ಎಂಟು ಗಂಟೆ ಈಜು, ಆಮೇಲೆ ವರ್ಕ್‌ ಔಟ್‌, ಆಮೇಲೆ ವೇಟ್‌ ಟ್ರೈನಿಂಗ್‌. ವರ್ಷವರ್ಷಗಳ ಕಾಲ ಈಜು, ತರಬೇತಿ, ಆಹಾರ, ನಿದ್ದೆ.  ಈಜು ತರಬೇತಿ ಆಹಾರ ನಿದ್ದೆ ಅಷ್ಟೇ."

ಅದಕ್ಕೇ ತಾನೇ ಮೈಕೆಲ್ 23 ಚಿನ್ನ  3 ಬೆಳ್ಳಿ  2 ಕಂಚು ಒಟ್ಟು 28 ಒಲಿಂಪಿಕ್ ಪದಕ ಗೆದ್ದಿದ್ದು. Not a joke. 

ಅಷ್ಟೇ. ಹೆಚ್ಚೇನು ಹೇಳುವ ಅಗತ್ಯವೂ ಇಲ್ಲ.  

ದೀಪಾ ಹಿರೇಗುತ್ತಿ


Thursday, December 11, 2025

ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರ ಸಂಕ್ಷಿಪ್ತ ಪರಿಚಯ

 ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರ ಸಂಕ್ಷಿಪ್ತ ಪರಿಚಯ 


    ಸಿ.ಎಸ್. ಕುಮಾರಸ್ವಾಮಿ ಮತ್ತು ರೂಪ ಇವರು ವಚನಗಳ ಬಗ್ಗೆ ಹೊಂದಿರುವ ಪ್ರೀತಿ ಹಾಗೂ ವಚನ ಪ್ರಸಾರಕ್ಕೆ ಕೈಗೊಂಡಿರುವ ಚಟುವಟಿಕೆಗಳಿಂದ ವಚನ ಕುಮಾರಸ್ವಾಮಿ ಮತ್ತು ವಚನ ರೂಪ ಎಂದೇ ಚಿರಪರಿಚಿತರಾಗಿದ್ದಾರೆ.

     

    ೨೦೧೬ರಲ್ಲಿ ವಚನ ಪ್ರಸಾರಕ್ಕೆ ಶರಣು ವಿಶ್ವವಚನ ಫೌಂಡೇಷನ್ ಎಂಬ ಅಂತರರಾಷ್ಟಿçÃಯ ಸಂಸ್ಥೆ ಸ್ಥಾಪಿಸಿ ಅದರ ಮುಖಾಂತರ ೧೫ ದೇಶ ಮತ್ತು ೧೦ ರಾಜ್ಯಗಳಿಗೆ ಅಂತರ್ಜಾಲದ ಮುಖಾಂತರ ೧ ಲಕ್ಷಕ್ಕೂ ಹೆಚ್ಚು ಜನರಿಗೆ ವಚನ ಪ್ರಸಾರ ಮಾಡುತ್ತಿದ್ದಾರೆ. 

    ವಚನ ಸಾಹಿತ್ಯ ಪ್ರಸಾರಕ್ಕಾಗಿ ತಮ್ಮ ಸೇವೆಯನ್ನು ಮುಡುಪಾಗಿಟ್ಟಿರುವ ಇವರು ಇದುವರೆಗೆ ೧೨೩ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ,  ಎಲ್ಲಾ ಮನೆಗಳಿಗೆ ಉಚಿತವಾಗಿ ವಚನ ಪುಸ್ತಕ ನೀಡಿ ವಚನ ಸಾಹಿತ್ಯದ ಬಗ್ಗೆ ಜಾಗೃತಿ ಉಂಟು ಮಾಡುವ  ೨೮ ವಚನಗ್ರಾಮ ಕಾರ್ಯಕ್ರಮ ನಡೆ¸ಸಿದ್ದಾರೆ.

   ವಚನ ಸಾಹಿತ್ಯದ ಬಗ್ಗೆ ಪ್ರತೀ ವಾರ ಪ್ರಶ್ನೆಗಳನ್ನು ಕೇಳುವ ೧೬೧ ಥಟ್ ಅಂತ ಉತ್ತರಿಸಿ ಕಾರ್ಯಕ್ರಮ ನಡೆಸಲಾಗಿದೆ.

   ಸರ್ಕಾರಿ ಶಾಲೆಗಳ ಬಲವರ್ಧನೆಗೆ ಅಗತ್ಯ ಸೌಲಭ್ಯ ವಿತರಣೆ ಎಂಬ ಕಾರ್ಯಕ್ರಮ ಕೈಗೊಂಡು ಅಲ್ಲಿನ ವಿದ್ಯಾರ್ಥಿಗಳಿಗೆ ಸಮವಸ್ತç, ನೋಟ್‌ಬುಕ್, ಬ್ಯಾಗ್, ಎಕ್ಸಾಂ ಪ್ಯಾಡ್ ಮುಂತಾದವುಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಇದುವರೆಗೆ ೩೫ ಕಾರ್ಯಕ್ರಮ ನಡೆಸಲಾಗಿದೆ.

   ಇದಲ್ಲದೇ ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ, ಕಾಲೇಜಿನೆಡೆಗೆ ವಚನಗಳ ನಡಿಗೆ, ವಿಶ್ವವಿದ್ಯಾನಿಲಯಗಳೆಡೆಗೆ,  ಅನಾಥಾಶ್ರಮಗಳೆಡೆಗೆ ವಚನಗಳ ನಡಿಗೆ, ವೃದ್ಧಾಶ್ರಮಗಳೆಡೆಗೆ ವಚನಗಳ ನಡಿಗೆ, ಹಸಿವು ಮುಕ್ತ ಸಮಾಜಕ್ಕಾಗಿ ನಮ್ಮ ಚಿತ್ತ, ಸಸ್ಯೋತ್ಸವ, ವಿದೇಶಗಳಲ್ಲಿ ವಚನ ಮಾಧುರ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರ ಜೊತೆಗೆ ಸಿದ್ಧಗಂಗಾ ದಿವ್ಯ ತಪೋನಿಧಿ, ವಿಶ್ವವಚನ ಆ್ಯಪ್, ಶ್ರೀ ಗುರುಮಲ್ಲೇಶ್ವರರ ಜೀವನ ದರ್ಶನ, ಗದ್ಧಿಗೆಯ ಸದ್ಗುರು ಶ್ರೀ ಕೆಂಡಗಣ್ಣಸ್ವಾಮಿ, ಯುಗಪ್ರವರ್ತಕ ಬಸವಣ್ಣ ಆಂಗ್ಲ ಭಾಷೆಯಲ್ಲಿ (ಖಿಊಇ PIಔಓಇಇಖ ಔಈ ಖಿಊಇ ಇಖಂ - ಃಂSAಗಿAಓಓA), ಶ್ರೀ ಮಲೆ ಮಹದೇಶ್ವರ ಸಾಕ್ಷö್ಯಚಿತ್ರ ನಿರ್ಮಾಣ ಮಾಡಿ ವಚನಪ್ರಸಾರ ಮಾಡಲಾಗುತ್ತಿದೆ.  ವಚನಗಳ ಆಧಾರದ ಮೇಲೆ ವಚನ ಕಲ್ಯಾಣ ಮಹೋತ್ಸವ, ಗೃಹ ಪ್ರವೇಶ, ನಾಮಕರಣ ಕಾರ್ಯಕ್ರಗಳನ್ನು ನಡೆಸಿಕೊಡುತ್ತಿರುವ ಇವರು ಇದುವರೆಗೆ ೧೦೦ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿಕೊಟ್ಟಿರುತ್ತಾರೆ.


  ವಚನ ಕುಮಾರಸ್ವಾಮಿ ಅವರು ಇದುವರೆಗೆ ೨೬ ಕೃತಿ ರಚಿಸಿದ್ದರೆ ರೂಪ ಕುಮಾರಸ್ವಾಮಿ ಅವರು ೧೬ ಕೃತಿಗಳನ್ನು ರಚಿಸಿದ್ದಾರೆ. ಒಟ್ಟಾರೆ ಸಂಸ್ಥೆ ವತಿಯಿಂದ ಶರಣು ದಿನಚರಿ, ಬಸವಭಾನು ಸಂಚಿಕೆ, ಶರಣರ ಜೀವನ ಚರಿತ್ರೆ ಮತ್ತು ವಚನಗಳನ್ನು ಒಳಗೊಂಡ ೬೦ಕ್ಕೂ ಕೃತಿಗಳನ್ನು  ಶರಣ ಸಾಹಿತ್ಯಕ್ಕೆ ಸಂಬAಧಿಸಿದAತೆ ಹೊರತರಲಾಗಿದೆ.

       ವಚನ ಸಾಹಿತ್ಯಕ್ಕೆ ಸಂಬAಧಿಸಿದAತೆ ಚಂದನವಾಹಿನಿಯಲ್ಲಿ ಜೀವನ ದರ್ಶನ ಎಂಬ ಲೈವ್ ಪ್ರೋಗ್ರಾಂ, ನಿವ್ಸ್ ೧ ಕನ್ನಡವಾಹಿನಿಯಲ್ಲಿ ಪ್ರತಿದಿನ ವಚನಸಾರ ಕಾರ್ಯಕ್ರಮ ಬಿತ್ತರ, ಯಶ್‌ಟೆಲ್ ಟಿವಿ ಯಲ್ಲಿ ಸಂದರ್ಶನದಲ್ಲಿ ಭಾಗವಹಿಸುವಿಕೆ, ಸಿರಿ ಟಿವಿಯಲ್ಲಿ ಸಾಧಕರ ಹೆಜ್ಜೆ ಎಂಬ ಕಾರ್ಯಕ್ರಮದಲ್ಲಿ ಸಾಧಕರಾಗಿ ಭಾಗವಹಿಸುವಿಕೆ, ಬಸವ ಟಿ ವಿಯಲ್ಲಿ ಉಪನ್ಯಾಸ, ಮಂಡ್ಯದ ಡೈಮಂಡ್ ಕನ್ನಡ ವಾಹಿನಿಯಲ್ಲಿ ಸಾಧಕರ ಸಿಪಾಯಿಯಾಗಿ ಭಾಗವಹಿಸುವಿಕೆ, ೯೩.೫ ಎಫ್.ಎಂ ಚಾನಲ್‌ನಲ್ಲಿ ರೆಡ್ ರಿವೈಂಡ್ ಪ್ರೋಗ್ರಾಂನಲ್ಲಿ ಲೈಪ್ ರಿವೈಂಡ್ ಮಾಡಿರುತ್ತಾರೆ. ಸರಗೂರಿನ ಜನಧ್ವನಿ ಎಫ್ ಎಂ ಚಾನಲ್‌ನಲ್ಲಿ ಜನಧ್ವನಿ ಇಲ್ಲಿ ೧೦೦೦ ಕ್ಕೂ ಹೆಚ್ಚು ವಚನಾಮೃತ ಕಾರ್ಯಕ್ರಮವನ್ನು ನೀಡಿರುತ್ತಾರೆ. ಅಲ್ಲದೇ ೨೦೦ಕ್ಕೂ ಹೆಚ್ಚು ಶರಣರ ಪರಿಚಯವನ್ನು ಮಾಡಿರುತ್ತಾರೆ.

     ವಚನ ಸಾಹಿತ್ಯ ಮತ್ತು ಇತರೆ ವಿಷಯಗಳಿಗೆ ಸಂಬAಧಿಸಿದAತೆ ನಾಡಿನ ಮತ್ತು ಹೊರ ರಾಜ್ಯಗಳಲ್ಲಿ ಸಂಚರಿಸಿ ಪತಿ ಪತ್ನಿ ಇಬ್ಬರೂ ೧೦೦೦ ಕ್ಕೂ ಹೆಚ್ಚು ಉಪನ್ಯಾಸ ನೀಡಿರುತ್ತಾರೆ.

    

    ಶರಣ ದಂಪತಿಗಳ ಸೇವೆಯನ್ನು ಗುರುತಿಸಿ ವಿವಿಧ ಪ್ರಶಸ್ತಿಗಳು ಹರಸಿ ಮತ್ತು ಅರಸಿ ಬಂದಿರುತ್ತವೆ. ಅವುಗಳೆಂದರೆ 

ಶ್ರೀ ಸಿದ್ಧಗಂಗಾ ಮಠ, ತುಮಕೂರು ವತಿಯಿಂದ ಸಂಘಸಿರಿ ಪ್ರಶಸ್ತಿ, ಬೆಂಗಳೂರು ಬಸವ ಸಮಿತಿ ವತಿಯಿಂದ ಬಸವ ಭೂಷಣ ಪ್ರಶಸ್ತಿ ರಾಷ್ಟ್ರೀಯ ಬಸವದಳ, ಬೆಂಗಳೂರು ವತಿಯಿಂದ ಶರಣ ಜ್ಞಾನರತ್ನ ಮತ್ತು ಶರಣ ಸೇವಾರತ್ನ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ‘ಜರಗನಹಳ್ಳಿ ಸಿದ್ಧಮ್ಮ ನಂಜುAಡಪ್ಪ ಶರಣ ದತ್ತಿ ಪ್ರಶಸ್ತಿ’, ಚಾಮರಾಜನಗರ ಜಿಲ್ಲೆ ಶ್ರೀ ಮುರುಘಾ ರಾಜೇಂದ್ರ ಮಹಾಸಂಸ್ಥಾನ ಶ್ರೀಮಠ, ಮರಿಯಾಲ ವತಿಯಿಂದ ಮುರುಘಾ ಚೇತನ, ಮೈಸೂರು ಬಸವಸಮಿತಿ ವತಿಯಿಂದ ಬಸವಶ್ರೀ ಪ್ರಶಸ್ತಿ, ಮಂಡ್ಯದ ಹಲ್ಲೇಗೆರೆ ಅಮ್ಮಯ್ಯಮ್ಮ ದುರ್ಗೇಗೌಡ ಪ್ರತಿಷ್ಠಾನ ವತಿಯಿಂದ ಹತ್ತು ಸಾವಿರ ನಗದು ಬಹುಮಾನ ಒಳಗೊಂಡ ವಚನರತ್ನ ಪ್ರಶಸ್ತಿ, ಮಂಡ್ಯ ಜಿಲ್ಲೆಯ ಶ್ರೀ ಹೊಸಮಠ, ಸರಗೂರು ವತಿಯಿಂದ ಕಾಯಕಯೋಗಿ ಪ್ರಶಸ್ತಿ, ಶಿವಮೊಗ್ಗ ಜಿಲ್ಲೆ ಹರಮಘಟ್ಟ ಶ್ರೀ ಬಸವೇಶ್ವರ ಬಳಗದಿಂದ ಅಲ್ಲಮಶ್ರೀ ಪ್ರಶಸ್ತಿ, ಮಂಡ್ಯದ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ವಿವೇಕಶ್ರೀ ಪ್ರಶಸ್ತಿ, ಜಮಖಂಡಿಯ ಬಸವಜ್ಞಾನ ಗುರುಕುಲದ ವತಿಯಿಂದ ಬಸವಚೇತನ ಪ್ರಶಸ್ತಿ, ಚಿಕ್ಕಮಗಳೂರಿನ ಶ್ರೀ ಜಯಬಸವ ತಪೋವನ ವತಿಯಿಂದ ಬಸವಭೂಷಣ ಪ್ರಶಸ್ತಿ, ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ವಚನ ಸಿರಿ ಮುಕುಟ, ಪಿರಿಯಾಪಟ್ಟಣದ ದಾರಿದೀಪ ಪತ್ರಿಕೆ ವತಿಯಿಂದ ಕಾಯಕರತ್ನ, ಬಹರೈನ್ ಬಸವಸಮಿತಿಯಿಂದ ಅಭಿನಂದನೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಭಿನಂದನೆ ಹೆಗ್ಗಡದೇವನಕೋಟೆ ಲಯನ್ಸ್ ಸಂಸ್ಥೆಯಿAದ ಅಭಿನಂದನೆ ಬೆಮೆಲ್ ಬಸವಸಮಿತಿ, ಬೆಂಗಳೂರು ಇವರಿಂದ ಅಭಿನಂದನೆ ೫೦೦ಕ್ಕೂ ಹೆಚ್ಚು ಸಂಘಸAಸ್ಥೆಗಳಿAದ ಗೌರವ ಸನ್ಮಾನ ಸ್ವೀಕರಿಸಿರುತ್ತಾರೆ.

ವಿಶ್ವಮಟ್ಟದಲ್ಲಿ ವಚನ ಸಾಹಿತ್ಯವನ್ನು ಪಸರಿಸುತ್ತಿರುವ ಇವರ ಸೇವಾ ಕೈಂಕರ್ಯ ಹೀಗೆ ಸಾಗಲಿ ಎಂದು ಮನತುಂಬಿ ಹಾರೈಸುತ್ತೇವೆ.