Tuesday, September 23, 2025

ವಚನ ಕುಮಾರಸ್ವಾಮಿ ಪರಿಚಯ

 



ವಚನ ಕುಮಾರಸ್ವಾಮಿ

ವಚನ ಕುಮಾರಸ್ವಾಮಿ (ಜನನ: 27 ಆಗಸ್ಟ್ 1978) ಅವರು ಕನ್ನಡದ ವಚನ ಸಾಹಿತ್ಯದ ಪ್ರಸಾರಕರಾಗಿದ್ದು, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರು. ವಚನಗಳ ಬಗ್ಗೆ ಹೊಂದಿರುವ ಅಭಿಮಾನ ಮತ್ತು ಅವುಗಳ ಪ್ರಚಾರಕ್ಕಾಗಿ ಕೈಗೊಂಡ ಚಟುವಟಿಕೆಗಳಿಂದಾಗಿ “ವಚನ ಕುಮಾರಸ್ವಾಮಿ” ಎಂದು ಜನಪ್ರಿಯರಾಗಿದ್ದಾರೆ.

ಜೀವನ

ವಚನ ಕುಮಾರಸ್ವಾಮಿ 1978ರ ಆಗಸ್ಟ್ 27ರಂದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಚಾಮನಹಳ್ಳಿಹುಂಡಿ ಗ್ರಾಮದಲ್ಲಿ ಜನಿಸಿದರು. ತಂದೆ ಸಿ.ಪಿ. ಸಿದ್ದಲಿಂಗಪ್ಪ, ತಾಯಿ ದೇವಮ್ಮ. ಪತ್ನಿ ರೂಪ ಕುಮಾರಸ್ವಾಮಿ; ಇವರಿಗೆ ಇಬ್ಬರು ಮಕ್ಕಳು — ಸಿ.ಕೆ. ಗಿರಿಜೇಶ್ ಮತ್ತು ಸಿ.ಕೆ. ವಚನ.

ವಿದ್ಯಾಭ್ಯಾಸ

ಪ್ರಾಥಮಿಕ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಾಮನಹಳ್ಳಿಹುಂಡಿ

ಮಾಧ್ಯಮಿಕ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕೆರೆಯೂರು

ಪ್ರೌಢಶಾಲೆ: ಸೇಂಟ್ ಮೇರಿಸ್ ಪ್ರೌಢಶಾಲೆ, ಮೈಸೂರು

ಪಿಯುಸಿ: ಮರಿಮಲ್ಲಪ್ಪ ಕಾಲೇಜು, ಮೈಸೂರು

ಪದವಿ: ವಿಶ್ವವಿದ್ಯಾನಿಲಯ ಸಂಜೆ ಕಾಲೇಜು, ಮೈಸೂರು

ಟಿ.ಸಿ.ಎಚ್: ವಸಂತಮಹಲ್, ಮೈಸೂರು

ಬಿ.ಎಡ್, ಸ್ನಾತಕೋತ್ತರ ಪದವಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು

ಕನ್ನಡ ವಿಷಯದಲ್ಲಿ ಎನ್‌ಇಟಿ ಪರೀಕ್ಷೆಯಲ್ಲಿ ತೇರ್ಗಡೆ

ವೃತ್ತಿ

ಕುಮಾರಸ್ವಾಮಿ ತಮ್ಮ ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಚಿಕ್ಕರೆಯೂರಿನ ಸರ್ಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಮೈಸೂರು ಉತ್ತರವಲಯದ ಶಿಕ್ಷಣ ಇಲಾಖೆಯಲ್ಲಿ ಕ್ಷೇತ್ರಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದರು. ಪ್ರಸ್ತುತ ಮೈಸೂರು ತಾಲ್ಲೂಕಿನ ಕೆ. ಹೆಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.

ಸಾಹಿತ್ಯ ಮತ್ತು ಪ್ರವೃತ್ತಿ

ವಚನಗಳ ವಾಚನ, ತಾತ್ಪರ್ಯ ನಿರೂಪಣೆ, ಉಪನ್ಯಾಸ

ಕವಿತೆ, ಪ್ರಬಂಧ, ಶರಣ ಸಾಹಿತ್ಯ ಪುಸ್ತಕಗಳ ರಚನೆ

ಶರಣರ ಸಾಕ್ಷ್ಯಚಿತ್ರ ನಿರ್ಮಾಣ

ಶರಣ ಕ್ಷೇತ್ರಗಳ ಭೇಟಿ ಮತ್ತು ಸಂಶೋಧನೆ

2016ರಲ್ಲಿ ಪತ್ನಿಯೊಂದಿಗೆ ಶರಣು ವಿಶ್ವವಚನ ಫೌಂಡೇಷನ್ ಸ್ಥಾಪಿಸಿ ವಚನಗಳ ಅಂತರರಾಷ್ಟ್ರೀಯ ಪ್ರಸಾರಕ್ಕೆ ಮುನ್ನುಡಿ ಬರೆದಿದ್ದಾರೆ. ಈ ಸಂಸ್ಥೆಯ ಮೂಲಕ:

15 ದೇಶ ಮತ್ತು 10 ರಾಜ್ಯಗಳಲ್ಲಿನ 1 ಲಕ್ಷಕ್ಕೂ ಹೆಚ್ಚು ಜನರಿಗೆ ವಾಟ್ಸಾಪ್ ಮುಖಾಂತರ ವಚನಗಳ ಪ್ರಸಾರ

ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ವಚನ ನಡಿಗೆ ಕಾರ್ಯಕ್ರಮ

“ವಚನಗ್ರಾಮ” ಯೋಜನೆಗಳ ಮೂಲಕ ವಚನಪರ ಚಟುವಟಿಕೆ

ಪ್ರಮುಖ ಕೃತಿಗಳು

ನೂರೊಂದು ವಚನಕಾರರ ನೂರೊಂದು ವಚನಗಳು

ಬಸವಣ್ಣನವರ ನೂರೊಂದು ವಚನಗಳು

ವಚನ ಕಲ್ಯಾಣ

ವಚನಸಾರ

ವಚನಾಮೃತ

ನಿಜಸುಖಿ ಹಡಪದ ಅಪ್ಪಣ್ಣ

ವಚನಭಾರತ

ಗುರುಕರುಣ ತ್ರಿವಿಧಿ ಮತ್ತು ವಚನಗಳು

ಶರಣ ಸೌರಭ (ಬಸವಯುಗದ ವಚನಕಾರರ ಪರಿಚಯ)

ಕೋಟಿಗೊಬ್ಬ ಶರಣ (ಕವನ ಸಂಕಲನ)

ವಚನ ಕಥಾ ಪ್ರಪಂಚ

ವಿಜಯ ದೀಪ

ವಚನ ಶಾಲೆ

ವಚನ ದೀಪ

ದಿವ್ಯ ಪ್ರಸಾದ

ಬಸವ ವಚನಾಮೃತ

ಅಕ್ಕನ ವಚನಾಮೃತ

ಬಸವಭಾನು ಸಂಚಿಕೆ

ಶರಣು ದಿನಚರಿ (2016ರಿಂದ 2026ರವರೆಗೆ 11 ಸಂಪುಟಗಳು)

ಪ್ರಶಸ್ತಿ ಮತ್ತು ಗೌರವಗಳು

ಗೌರವ ಡಾಕ್ಟರೇಟ್ – ಗ್ಲೋಬಲ್ ಪೀಸ್ ಯುನಿವರ್ಸಿಟಿ

ಸಂಘಸಿರಿ ಪ್ರಶಸ್ತಿ – ಸಿದ್ಧಗಂಗಾ ಮಠ

ಬಸವಭೂಷಣ ಪ್ರಶಸ್ತಿ – ಬೆಂಗಳೂರು ಬಸವ ಸಮಿತಿ

ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳು

ವಚನ ಸಿರಿ ಮುಕುಟ, ಶರಣ ಜ್ಞಾನರತ್ನ, ಬಸವಶ್ರೀ, ವಚನರತ್ನ, ಕಾಯಕಯೋಗಿ, ಅಲ್ಲಮಶ್ರೀ ಮುಂತಾದ ಬಹುಮಾನಗಳು

100ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಂದ ಅಭಿನಂದನೆಗಳು ಮತ್ತು ಸನ್ಮಾನಗಳು

Monday, September 15, 2025

ಧರ್ಮಪೀಠವನ್ನು ಜ್ಞಾನಪೀಠವನ್ನಾಗಿಸಿದ ಮಹಾತ್ಮರು ಸುತ್ತೂರು ಜಗದ್ಗುರು ರಾಜೇಂದ್ರಶ್ರೀಗಳು : ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ

 



ಮೈಸೂರು : ಧರ್ಮಪೀಠವನ್ನು ಜ್ಞಾನಪೀಠವನ್ನಾಗಿಸಿದ ಮಹಾತ್ಮರು ಸುತ್ತೂರು ಜಗದ್ಗುರು ರಾಜೇಂದ್ರಶ್ರೀಗಳು ಎಂದು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ 


ನಗರದ ಮೇಟಗಳ್ಳಿ ಜೆ.ಎಸ್.ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುತ್ತೂರು ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ೧೧೦ನೇ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದ ಅವರು ರಾಜೇಂದ್ರ ಶ್ರೀಗಳು ವಿಶಾಲವಾದ ಹಣೆಯ ತುಂಬಾ ಭಕ್ತಿ, ಜ್ಞಾನ ಮತ್ತು ವೈರಾಗ್ಯದ ಸಂಕೇತದAತೆ ಸದಾ ಶೋಭಿಸುವ ಬೆಳ್ಳಂಬೆಳಗಿನ ಭಸ್ಮಧಾರಣೆ ಮಾಡಿಕೊಂಡು ದರ್ಶನಕ್ಕೆ ಬಂದವರನ್ನು ಇವನಾರವನೆನ್ನದೆ ಇವನಮ್ಮವ ಎಂದು ಎಲ್ಲರನ್ನೂ ತಮ್ಮಲ್ಲಿಗೆ ಬರಮಾಡಿಕೊಳ್ಳುವ ವಿಶಾಲ ಬಾವನೆಯ ಮಾತೃ ಹೃದಯಿಗಳು. ಸಾವಿರಾರು ಮಕ್ಕಳಿಗೆ ವಸತಿ ಕಲ್ಪಿಸಿ ಅನ್ನದಾಸೋಹ ನೀಡಿ ಅನ್ನ ಬ್ರಹ್ಮ ಎನಿಸಿಕೊಂಡರು. ಜಗವೆಲ್ಲ ನಗುತಿರಲಿ, ಜಗದಳುವು ನನಗಿರಲಿ ಎಂಬ ಕವಿ ಈಶ್ವರ ಸಣಕಲ್ಲ ಅವರ ಕವಿತೆ ಅಕ್ಷರಶಃ ರಾಜೇಂದ್ರ ಶ್ರೀಗಳ ಜೀವನಕ್ಕೆ ಹೊಂದುತ್ತದೆ. ಶ್ರೀಗಳ ಸೇವೆಯನ್ನು ಕಣ್ಣಾರೆ ಕಂಡಿದ್ದ ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರು ರಾಜಗುರುತಿಲಕ ಎಂಬ ಬಿರುದು ನೀಡಿ ಅರಮನೆಗೆ ರಾಜಗುರುವನ್ನಾಗಿ ಸ್ವೀಕರಿಸಿದರು ಎಂದರು.


ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಶಿಕ್ಷಕರ ದಿನಾಚರಣೆ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ ಇಂದು ಕೃತಕ ಬುದ್ಧಿಮತ್ತೆಯನ್ನು ಅನೇಕರು ಗುರು ಎಂದು ಸಂಬೋಧಿಸುತ್ತಿದ್ದರೂ ಸಹಾ ಭೌತಿಕ ಗುರುಗಳು ಕೊಡುವ ಪ್ರೀತಿ, ಮಮತೆ, ಮೌಲ್ಯ, ಆತ್ಮವಿಶ್ವಾಸ, ಮತ್ತು ಸ್ಫೂರ್ತಿಯನ್ನು ನೀಡಲು ಸಾಧ್ಯವಿಲ್ಲ. ಬದಲಾದ ವಿದ್ಯಾರ್ಥಿಗಳ ಮನೋಭಾವ ಅರಿತು ಅವರನ್ನು ನಾಗರೀಕರನ್ನಾಗಿ ಮಾಡುತ್ತಿರುವ ಅನೇಕ ಪ್ರಾಮಾಣಿಕ ಶಿಕ್ಷಕರು ಭರವಸೆಯ ಸಾಕಾರಮೂರ್ತಿಗಳಾಗಿ ಕಂಗೊಳಿಸುತ್ತಿದ್ದಾರೆ. ಶಿಕ್ಷಕರ ದಿನಾಚರಣೆಯ ದಿನ ನಾವು ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಸ್ಮರಿಸುವುದರ ಜೊತೆಗೆ ಮಹಿಳೆಯರಿಗೆ ಶಿಕ್ಷಣ ನಿಷೇಧ ಏರಿದ್ದ ಕಾಲಘಟ್ಟದಲ್ಲಿ ಸಂಪ್ರದಾಯವಾದಿಗಳಿAದ ಅನೇಕ ಪೆಟ್ಟು ತಿಂದು ಮಹಿಳೆಯರಿಗೆ ಶಿಕ್ಷಣ ನೀಡಿ ಅವರು ಮುಖ್ಯವಾಹಿನಿಗೆ ಬರಲು ಕಾರಣೀಭೂತರಾದ ಆಧುನಿಕ ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರನ್ನೂ ಕೂಡಾ ಸ್ಮರಿಸಬೇಕು ಎಂದರು.

ಶಿರಮಳ್ಳಿ ವಿರಕ್ತಮಠದ ಶ್ರೀ ಇಮ್ಮಡಿ ಮುರಘಿ ಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ ಸ್ವಾರ್ಥವನ್ನು ಮೈಗೂಡಿಸಿಕೊಳ್ಳದೆ ರಾಜೇಂದ್ರ ಶ್ರೀಗಳಂತೆ ನಿಸ್ವಾರ್ಥವನ್ನು ರೂಢಿಸಿಕೊಂಡು ಸಮಾಜಕ್ಕೆ ಉಪಕಾರಿಯಾಗಿ ಬಾಳಬೇಕು. ಪ್ಲಾಸ್ಟಿಕ್ ಮತ್ತು ಇತರೆ ವಸ್ತುಗಳಿಂದ ವಿಧವಿಧದ ಹೂಗಳನ್ನು ಮಾಡಿ ಅಲಂಕಾರಕ್ಕೆ ಬಳಸಲಾಗುತ್ತದೆ. ಆದರೆ ನೈಜ ಹೂಗಳು ಕೊಡುವ ಸೌಂದÀರ್ಯ, ನೈಜತೆ ಮತ್ತು ಪರಿಮಳವನ್ನು ಕೃತಕ ಹೂಗಳು ನೀಡಲು ಸಾಧ್ಯವಿಲ್ಲ. ನಾವು ನೈಜ ಜೀವನಕ್ಕೆ ಬೆಲೆ ಕೊಟ್ಟು ವಿಶಾಲ ಹೃದಯಿಗಳಾಗಿ ರೂಪುಗೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತು ಶೇ ೧೦೦ ಫಲಿತಾಂಶ ನೀಡಿದ ವಿಷಯ ಶಿಕ್ಷಕರಾದ ದೀಪ ಪ್ರಶಾಂತ್ ಮತ್ತು ದೀಪ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಸತೀಶ್ ಸ್ವಾಗತಿಸಿದರು. ಸಂಗೀತ ಶಿಕ್ಷಕಿ ಸುಮಂಗಲ ಜಂಗಮಶೆಟ್ಟಿ ಪ್ರಾರ್ಥಿಸಿದರು. ಶಿಕ್ಷಕಿ ಎಂ.ವಿ ಅಮೃತವಾಣಿ ವಂದಿಸಿದರು.  ಶಿಕ್ಷಕ ಬಿ.ಆರ್‌ ಸುನೇಶ್‌ ಕುಮಾರ್‌ ನಿರೂಪಿಸಿದರು. ಶಾಲೆಯ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.