ಇಷ್ಟಲಿಂಗ
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ
ಕೂಡಲಸಂಗಮದೇವಯ್ಯಾ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಈ ವಚನ ಇಷ್ಡಲಿಂಗದ ವ್ಯಾಪ್ತಿಯನ್ನು ತಿಳಿಸುತ್ತದೆ.
ವ್ಯಕ್ತಿಯು ಜಾತಿಯಿಂದ ದೊಡ್ಡವನಾಗದೆ ಆತ್ಮಜ್ಯೋತಿಯಿಂದ ಮಾತ್ರ ದೊಡ್ಡವನಾಗುತ್ತಾನೆ. ಅಂತಹ ಆತ್ಮಜ್ಯೋತಿಯನ್ನು ಸಂಕೇತಿಸುವ ಕುರುಹು ಇಷ್ಟಲಿಂಗ.
ಭಾರತದ ರಾಷ್ಟ್ರಧ್ವಜವು ಹೇಗೆ ಯಾವುದೇ ಜಾತಿಮತದ ಕುರುಹಾಗದೆ, ಸ್ವತಂತ್ರ ಪ್ರಜಾಪ್ರಭುತ್ವವಾದಿ ರಾಷ್ಟ್ರದ ಸಾರ್ವಭೌಮತ್ವವನ್ನು ಸಾರುವ ಪ್ರತೀಕವೋ ಹಾಗೆ ಇಷ್ಟಲಿಂಗವು ಜಾತ್ಯಾತೀತ, ಧರ್ಮಸಹಿತ, ಸಮಾಜವಾದಿ ದೇಶವನ್ನು ಕಟ್ಟುವುದರ ಸಂಕೇತವಾಗಿದೆ.
ಧಾರ್ಮಿಕ ಚಟುವಟಿಕೆಗಳು ಸ್ತ್ರೀಯರಿಗೆ ನಿಷಿದ್ಧವಾಗಿದ್ದ ಕಾಲದಲ್ಲಿ ವಿಶ್ವಗುರು ಬಸವಣ್ಣನವರು 12 ನೇ ಶತಮಾನದಲ್ಲಿ ತಮ್ಮ ಸಹೋದರಿ ನಾಗಲಾಂಬಿಕೆಯವರಿಗೆ ಇಷ್ಟಲಿಂಗ ದೀಕ್ಷೆ ನೀಡುವುದರ ಮೂಲಕ ಮಹಿಳೆಯರು ಕೂಡಾ ಧಾರ್ಮಿಕ ಸ್ವಾತಂತ್ರ್ಯ ನೀಡಿದುದರ ಫಲವಾಗಿ ಅಕ್ಕ ನಾಗಲಾಂಬಿಕೆ ವಿಶ್ವದ ಪ್ರಥಮ ಲಿಂಗಾಯತ ಮಹಿಳೆಯಾದರು.
ಇಷ್ಟಲಿಂಗ ದೀಕ್ಷೆ ಮೂಲಕ ಲಿಂಗಾಯತ ಧರ್ಮವು ಎಲ್ಲಾ ಜಾತಿಗಳ ಮತ್ತು ಎಲ್ಲಾ ಉದ್ಯೋಗಗಳ ಜನರನ್ನು ತನ್ನತ್ತ ಸೆಳೆದುಕೊಳ್ಳುವ ಮೂಲಕ ವಿಶ್ವದಲ್ಲಿಯೇ ವಿಶಿಷ್ಟ ಧರ್ಮವಾಗಿ ರೂಪುಗೊಂಡಿದೆ.
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ
ಸಕಲವಿಸ್ತಾರದ ರೂಹು ನೀನೇ ದೇವಾ
`ವಿಶ್ವತಶ್ಚಕ್ಷು' ನೀನೆ ದೇವಾ
`ವಿಶ್ವತೋಮುಖ' ನೀನೆ ದೇವಾ
`ವಿಶ್ವತೋಬಾಹು' ನೀನೇ ದೇವಾ
`ವಿಶ್ವತಃಪಾದ' ನೀನೆ ದೇವಾ
ಕೂಡಲಸಂಗಮದೇವಾ.
ಎಂಬ ವಿಶ್ವಗುರು ಬಸವಣ್ಣನವರ ವಚನದಂತೆ ಪರಶಿವನನ್ನು ಇಷ್ಟಲಿಂಗ ರೂಪದಲ್ಲಿ ಕಂಡು ದೇಹವನ್ನೇ ದೇವಾಲಯವನ್ನಾಗಿ ರೂಪಿಸುವ ಇಷ್ಟಲಿಂಗವನ್ನು ಪ್ರತಿಯೊಬ್ಬರೂ ಧರಿಸೋಣ. ಇಷ್ಟಲಿಂಗ ತತ್ವವನ್ನು ಎತ್ತಿ ಹಿಡಿಯೋಣ.
Ishtalinga takes second place in Astavarna. Mainly Lingayath devotee consider Ishtalinga as a " living, moving " divinity.
Every day, the devotee removes the ishtalinga from its box, which they tie on their chest and places it the in left palm, offers puja with shiva mantra and then meditates about becoming one with the linga, i.e., the person who perform Ishtalinga pooja considered as sharana sati and lshtalinga as Linga pathi.
This is one of the mighty and spiritual journey a person who performs Ishtalinga Pooja undergoes. He/ she gets supernatural energy with positive potentialities which reaches them to a peak.
No religion gets the opportunities to carry God along with them. But Lingayath community gets this. When a person dies he cannot take money or wealth along with him, but has the opportunity of taking linga with him it means get united with Shiva after the death.

No comments:
Post a Comment