Thursday, December 10, 2020

ಶರಣು ವಿಶ್ವವಚನ ಫೌಂಡೇಷನ್‌ ಸದಸ್ಯತ್ವ

ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವ ಪಡೆದರೆ ಪ್ರತೀ ವರ್ಷ ವಚನಾಧಾರಿತ ಶರಣು ದಿನಚರಿ ಹಾಗೂ ಬಸವಭಾನು ಸಂಚಿಕೆ  ಹಾಗೂ ವಚನ ಪುಸ್ತಕಗಳನ್ನು   ರಿಜಿಸ್ಟರ್ ಪಾರ್ಸಲ್ ಮೂಲಕ ತಮ್ಮ ವಿಳಾಸಕ್ಕೆ ಕಳಿಸಲಾಗುತ್ತದೆ.

                               ಶರಣು ದಿನಚರಿ - 2021

ಶರಣು ವಿಶ್ವವಚನ ಫೌಂಡೇಷನ್ ೨೦೧೬ ರಿಂದ ವಚನಾಧಾರಿತ ಶರಣು ದಿನಚರಿಯನ್ನು ಹೊರತರುತ್ತಿದ್ದು, ಇದುವರೆಗೆ ಸಿದ್ಧಗಂಗೆ ಶ್ರೀಗಳು, ಸುತ್ತೂರು ಶ್ರೀಗಳು, ದೇವನೂರು ಶ್ರೀಗಳು, ಸಂಗಮ ತಾತ, ಶ್ರೀ ಕೆಂಡಗಣ್ಣೇಶ್ವರಸ್ವಾಮಿರವರಿಗೆ ಅರ್ಪಣೆ ಮಾಡಲಾಗಿದ್ದು, ಈ ವರ್ಷ ಶ್ರೀ ಎಡೆಯೂರು ತೋಂಟದ ಸಿದ್ಧಲಿಂಗೇಶ್ವರರಿಗೆ ಅರ್ಪಣೆಯಾಗಿದೆ. ೨೦೨೧ರ ಶರಣು ದಿನಚರಿಯಲ್ಲಿ ೨೫ ಶಿವಶರಣೆಯರ ಪರಿಚಯ ಹಾಗೂ ಅವರ ವಚನಗಳು, ಶರಣರ ದಿನಾಚರಣೆ ಮತ್ತು ಸಂಸ್ಮರಣೋತ್ಸವ ಹಾಗೂ ದತ್ತಿ, ಆಜೀವ ಸದಸ್ಯರ ವಿವರವನ್ನು ಅಡಕಗೊಳಿಸಲಾಗಿದ್ದು, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ಡಾ. ವಚನ ಕುಮಾರಸ್ವಾಮಿರವರು ಸಂಪಾದಿಸಿದ್ದಾರೆ. ಬೆಲೆ ರೂ. 150



ಬಸವಭಾನು ವಾರ್ಷಿಕ ಸಂಚಿಕೆ

ಬಸವಭಾನು ವಾರ್ಷಿಕ ಸಂಚಿಕೆಯನ್ನು ೨೦೨೦ ರಿಂದ ಹೊರತರುತ್ತಿದ್ದು, ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಒಳಗೊಂಡಿದೆ. ವಾರ್ಷಿಕ ಕಾರ್ಯಚಟುವಟಿಕೆಗಳ ವರದಿ ಮತ್ತು ಛಾಯ ಚಿತ್ರಗಳ ಸಂಚಿಕೆಯನ್ನು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ರೂಪ ಕುಮಾರಸ್ವಾಮಿಯವರು ಸಂಪಾದಿಸಿದ್ದಾರೆ. ಬೀದರ್ ಜಿಲ್ಲೆ ಭಾಲ್ಕಿ ಮಠದ ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರು ಮತ್ತು ಕರ್ನಾಟಕ ಸರ್ಕಾರದ ವಸತಿ ಸಚಿವರಾದ ಶ್ರೀ ಸೋಮಣ್ಣರವರು ಶುಭಸಂದೇಶ ನೀಡಿದ್ದಾರೆ. ರೂ. 150





                             ಅಕ್ಕನ ನೂರೆಂಟು ವಚನಗಳು

ಕನ್ನಡದ ಮೊಟ್ಟಮೊದಲ ಮಹಿಳಾ ಕವಯತ್ರಿ ಅಕ್ಕಮಹಾದೇವಿಯವರ ಸಂಕ್ಷಿಪ್ತ ಜೀವನ ಚರಿತ್ರೆ ಹಾಗೂ ಅವರ ೧೦೮ ವಚನಗಳನ್ನು ಶರಣ ಸಂಸ್ಕೃತಿಗಳ ಆರಾಧಕರಾದ ಶ್ರೀಮತಿ ಅಕ್ಕಮಹಾದೇವಿ ಮರಮ್ಕಲ್‌ರವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಅನುಭವಮಂಟಪದಲ್ಲಿ ಅಲ್ಲಮಪ್ರಭು, ಅಕ್ಕಮಹಾದೇವಿ, ಬಸವಣ್ಣ ಮುಂತಾದ ಶರಣರ ನಡುವೆ ನಡೆಯುವ ಸಂಭಾಷಣೆಯನ್ನು ಕೊಡಲಾಗಿದೆ. ಬೆಲೆ ರೂ. 50




                                       


ಎತ್ತಣ ಅಲ್ಲಮ ಎತ್ತಣ ರಮಣ

ಎತ್ತಣ ಅಲ್ಲಮ ಮತ್ತು ಎತ್ತಣ ರಮಣ ಕೃತಿಯನ್ನು ಡಾ ಪ್ರಸನ್ನ ಸಂತೆಕಡೂರುರವರು ಬರೆದಿದ್ದು, ರಮಣ ಮಹರ್ಷಿಗಳಂತಹ ಪೂಜ್ಯ ಸಾಧಕರಿಗೆ ಅಲ್ಲಮಪ್ರಭುಗಳು ದಾರಿದೀಪವಾಗಿರುವುದರ ಬಗ್ಗೆ ಹಾಗೂ ರಮಣ ಮಹರ್ಷಿಗಳ ಆಂತರಿಕ ಗುರು ಅಲ್ಲಮಪ್ರಭುಗಳೇ ಎಂದು ಸಾಕ್ಷೀಕರಿಸಿರುವ ಲೇಖಕರಾದ ಡಾ. ಪ್ರಸನ್ನ ಸಂತೇಕಡೂರು ಅವರ ಪ್ರಯತ್ನ ಶ್ಲಾಘನೀಯವಾದುದು. ಕೃತಿ 92 ಪುಟಗಳನ್ನು ಒಳಗೊಂಡಿದೆ. ಬೆಲೆ ರೂ 150





                            ವಚನ ಜ್ಞಾನೋದಯ

ವಿವಿಧ ಶರಣರ 200 ವಚನಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂಪಾದಿಸಿದ್ದಾರೆ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ರೂಪ ಕುಮಾರಸ್ವಾಮಿ. ಕೃತಿ 138 ಪುಟ ಹೊಂದಿದ್ದು ಇದರ ಬೆಲೆ ರೂ 150


ಹಾವಿನಹಾಳ ಕಲ್ಲಯ್ಯ

12 ನೇ ಶತಮಾನದ ಶರಣರಾದ ಹಾವಿನಹಾಳ ಕಲ್ಲಯ್ಯನವರ ಜೀವನ ಚರಿತ್ರೆ ಒಳಗೊಂಡ ಪುಸ್ತಕ ಇದಾಗಿದ್ದು, ಡಾ. ಪ್ರದೀಪ್ ಕುಮಾರ್ ಹೆಬ್ರಿ ಇದರ ಲೇಖಕರು. ಒಟ್ಟು 54 ಪುಟಗಳನ್ನು ಹೊಂದಿದ್ದು ಇದರ ಬೆಲೆ ರೂ. 60


                         ಜಗನ್ಮಾತೆ ಅಕ್ಕಮಹಾದೇವಿ

ಅಕ್ಕಮಹಾದೇವಿಯವರ ಸಂಪೂರ್ಣ ಜೀವನ ಚರಿತ್ರೆ ಒಳಗೊಂಡಿರುವ ಈ ಕೃತಿಯನ್ನು ನಗರ್ಲೆ ಶಿವಕುಮಾರ ರಚಿಸಿದ್ದು, 72 ಪುಟಗಳನ್ನು ಒಳಗೊಂಡಿದ್ದು, ಇದರ ಬೆಲೆ ರೂ 100



*ನಿಜಸುಖಿ ಹಡಪದ ಅಪ್ಪಣ್ಣ ಪುಸ್ತಕ*

*ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪರಾದ ಡಾ. ವಚನ ಕುಮಾರಸ್ವಾಮಿಯವರ ವಿರಚಿತ ನಿಜಸುಖಿ ಹಡಪದ ಅಪ್ಪಣ್ಣ ಕೃತಿ ಅಪ್ಪಣ್ಣನವರ ಸಂಪೂರ್ಣ ಜೀವನ ಚರಿತ್ರೆಯನ್ನು ತಿಳಿಸಿಕೊಡುವಲ್ಲಿ ಸಫಲವಾಗಿದೆ.*
*ಕೃತಿ ಬಿಡುಗಡೆ ಮಾಡಿ ಮಾತನಾಡಿದ ಮೈಸೂರಿನ ಹಿರಿಯ ಸಾಹಿತಿ ಕೆ. ಅನಂತರಾಮುರವರು ಪ್ರಪಂಚದಲ್ಲಿ ಎರಡು ರೀತಿಯ ಪುಸ್ತಕಗಳು ಇರುತ್ತವೆ. ಒಂದು ಕೈ ತೊಳೆದು ಮುಟ್ಟುವ ಪುಸ್ತಕ. ಎರಡು ಪುಸ್ತಕ ಓದಿದ ನಂತರ ಕೈ ತೊಳೆಯುವುದು. ನಿಜಸುಖಿ ಹಡಪದ ಅಪ್ಪಣ್ಣ ಕೃತಿ ಕೈತೊಳೆದು ಮುಟ್ಟುವ ಪುಸ್ತಕವಾಗಿದೆ ಎಂದರು.*
*ನಿಜಸುಖಿ ಹಡಪದ ಅಪ್ಪಣ್ಣ ಕೃತಿ ಒಟ್ಟು 14 ಅಧ್ಯಾಯಗಳಿಂದ ಕೂಡಿದೆ.*
೧. ಅಪ್ಪಣ್ಣನವರ ಬಾಲ್ಯ
೨.ಕಲ್ಯಾಣದೆಡೆಗೆ ಅಪ್ಪಣ್ಣ
೩.ಅಪ್ಪಣ್ಣನವರ ಕಾಯಕ
೪.ಬಸವಣ್ಣನವರ ಆಪ್ತನಾಗಿ ಅಪ್ಪಣ್ಣ
೫.ಅಲ್ಲಮರ ಆಗಮನದ ಸನ್ನಿವೇಶ
೬.ಅನುಭವಮಂಟಪ
೭.ಕಲ್ಯಾಣಕ್ರಾಂತಿ
೮.ಅಪ್ಪಣ್ಣನವರ ಕಡೆಯ ದಿನಗಳು
೯.ವಚನ ರಚನೆ
೧೦. ವಚನ - ನಿರ್ವಚನ
೧೧. ಶರಣರ ವಚನಗಳಲ್ಲಿ ಹಡಪದ ಅಪ್ಪಣ್ಣ
೧೨. ನಿಜಮುಕ್ತೆ ಲಿಂಗಮ್ಮ
೧೩. ಅಪ್ಪಣ್ಣನವರ ಕ್ಷೇತ್ರಗಳ ಕಿರು ಪರಿಚಯ
೧೪. ಅಪ್ಪಣ್ಣನವರಿಗೆ ಸಂಬಂಧಿಸಿದ ಕ್ಷೇತ್ರಗಳ ಚಿತ್ರಗಳು
*ಒಟ್ಟು 152 ಪುಟ ಹೊಂದಿರುವ ಕೃತಿಗೆ ಹೆಸರಾಂತ ಸಾಹಿತಿಗಳಾದ ಶ್ರೀ ರಂಜಾನ್ ದರ್ಗಾರವರು ಮುನ್ನುಡಿ ಬರೆದಿದ್ದು, ಖ್ಯಾತ ಅಂಕಣಕಾರ ಡಾ. ಗುಬ್ಬಿಗೂಡು ರಮೇಶ್ ರವರು ಬೆನ್ನುಡಿ ಬರೆದಿದ್ದಾರೆ.*
*ಶ್ರೀ ರಂಜಾನ್ ದರ್ಗಾರವರು ನಿಜಸುಖಿ ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರದ ಅಪ್ಪಣ್ಣರವರು ಒಂದೇ ಎಂಬ ಲೇಖನ ಬರೆದಿದ್ದು, ಇದನ್ನು ಓದುಗರಿಗೆ ಅನುಕೂಲವಾಗಲು ಪುಸ್ತಕದ ಕೊನೆಯಲ್ಲಿ ಕೊಡಲಾಗಿದೆ.*
ಕೃತಿಯ ಬೆಲೆ ರೂ 200





  ಶರಣು ವಿಶ್ವವಚನ ಫೌಂಡೇಷನ್ ಸದಸ್ಯತ್ವದ ವಿವರ 
ಮೂರು ವರ್ಷ ರೂ 1000 
ಆರು ವರ್ಷ ರೂ 2000 
ಆಜೀವ ಸದಸ್ಯತ್ವ ರೂ 5000 
ಶಾಲೆಗಳೆಡೆಗೆ ವಚನಗಳೆಡೆಗೆ ದತ್ತಿ ರೂ 10000 
ವಚನಗ್ರಾಮ ದತ್ತಿ ರೂ 25000 

*ಸಂಸ್ಥೆಯ ಸದಸ್ಯತ್ವ ಪಡೆದರೆ 80 G ಅಡಿಯಲ್ಲಿ ತೆರಿಗೆ ವಿನಾಯಿತಿ ದೊರೆಯುತ್ತದೆ*

         ಮೂರು ವರ್ಷದ ಸದಸ್ಯತ್ವ ಮೂರು ವರ್ಷ ಸದಸ್ಯರಾದರೆ ಮೂರು ವರ್ಷಗಳವರೆಗೆ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಆ ವರ್ಷ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ.

           ಆರು ವರ್ಷದ ಸದಸ್ಯತ್ವ ಆರು ವರ್ಷ ಸದಸ್ಯತ್ವ ಪಡೆದರೆ ಆರು ವರ್ಷಗಳವರೆಗೆ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಆ ವರ್ಷ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ. 

       ಆಜೀವ ಸದಸ್ಯತ್ವ ಆಜೀವ ಸದಸ್ಯತ್ವ ಪಡೆದರೆ ಜೀವನ ಪರ್ಯಂತ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಸಂಸ್ಥೆಯಿಂದ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ ಹಾಗೂ ಶರಣು ದಿನಚರಿ ಅಥವಾ ಬಸವಭಾನು ಸಂಚಿಕೆಯಲ್ಲಿ ಆಜೀವ ಸದಸ್ಯರ ಭಾವಚಿತ್ರವನ್ನು ಹಾಕಲಾಗುತ್ತದೆ. ಶರಣು ದಿನಚರಿ ಮತ್ತು ಬಸವಭಾನು ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ದಂಪತಿಗಳಿಬ್ಬರನ್ನೂ ಅಭಿನಂದಿಸಲಾಗುತ್ತದೆ.

                 ಶಾಲೆಗಳೆಡೆಗೆ ವಚನಗಳ ನಡಿಗೆ ದತ್ತಿ
 ಶಾಲೆಗಳೆಡೆಗೆ ವಚನಗಳ ನಡಿಗೆ ದತ್ತಿ ನೀಡಿದರೆ ಪ್ರತೀ ವರ್ಷ ದತ್ತಿ ಸದಸ್ಯರು ತಿಳಿಸುವ ಶಾಲೆಗಳಲ್ಲಿ ಅವರ ಹೆಸರಿನಲ್ಲಿ ವಚನ ಕಾರ್ಯಕ್ರಮ ಹಮ್ಮಿಕೊಂಡು ಶಾಲೆಗಳಲ್ಲಿ ವಚನ ಹೇಳುವ ಎಲ್ಲಾ ವಿದ್ಯಾರ್ಥಿಗಳಿಗೆ ವಚನ ದೀವಿಗೆ ಪ್ರಮಾಣ ಪತ್ರ ಮತ್ತು ವಚನ ಪುಸ್ತಕಗಳನ್ನು ನೀಡಲಾಗುತ್ತದೆ.ಹಾಗೂ ಪ್ರತೀ ವರ್ಷ ನಡೆಯುವ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ದತ್ತಿ ನೀಡಿದ ದಂಪತಿಗಳನ್ನು ಸನ್ಮಾನಿಸಲಾಗುತ್ತದೆ.


          ವಚನಗ್ರಾಮ ದತ್ತಿ
 ವಚನಗ್ರಾಮ ದತ್ತಿ ನೀಡಿದರೆ ಜೀವನ ಪರ್ಯಂತ ಶರಣು ದಿನಚರಿ, ಬಸವಭಾನು ಸಂಚಿಕೆ ಹಾಗೂ ಸಂಸ್ಥೆಯಿಂದ ಪ್ರಕಟವಾಗುವ ಶರಣರ ಜೀವನ ಚರಿತ್ರೆ ಪುಸ್ತಕಗಳನ್ನು ರಿಜಿಸ್ಟರ್ ಪಾರ್ಸಲ್ ಕಳಿಸಲಾಗುತ್ತದೆ ಹಾಗೂ ಶರಣು ದಿನಚರಿ ಅಥವಾ ಬಸವಭಾನು ಸಂಚಿಕೆಯಲ್ಲಿ ದಂಪತಿಗಳ ಭಾವಚಿತ್ರವನ್ನು ಹಾಕಲಾಗುತ್ತದೆ. ಶರಣು ದಿನಚರಿ ಮತ್ತು ಬಸವಭಾನು ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ದಂಪತಿಗಳಿಬ್ಬರನ್ನೂ ಅಭಿನಂದಿಸಲಾಗುತ್ತದೆ. ಹಾಗೂ ಪ್ರತೀ ವರ್ಷ ದತ್ತಿ ನೀಡಿದವರು ಹೇಳುವ ಗ್ರಾಮಗಳಲ್ಲಿ ವಚನಗ್ರಾಮ ಕಾರ್ಯಕ್ರಮ ಏರ್ಪಡಿಸಿ ಗ್ರಾಮದ ಪ್ರತೀ ಮನೆಗೆ ವಚನ ಪುಸ್ತಕ ನೀಡಿ ಆ ಗ್ರಾಮದ ಮಠ ಅಥವಾ ಸಾರ್ವಜನಿಕ ಪ್ರದೇಶದಲ್ಲಿ ಕಾರ್ಯಕ್ರಮ ಏರ್ಪಡಿಸಿ ವಚನ ಸಾಹಿತ್ಯದ ಬಗ್ಗೆ ಜಾಗೃತಿ ಏರ್ಪಡಿಸಿ ನಂತರ ಆ ಗ್ರಾಮವನ್ನು ವಚನಗ್ರಾಮ ಎಂದು ಘೋಷಿಸಲಾಗುತ್ತದೆ ನಂತರ ದತ್ತಿ ನೀಡಿದ ದಂಪತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ.
ಸಂಸ್ಥೆಯ ಸದಸ್ಯರಾಗ ಬಯಸುವವರು ಕೆಳಗಿನ ಖಾತೆಗೆ ಹಣ ಜಮಾ ಮಾಡಿ ತಮ್ಮ ವಿಳಾಸ ಕಳಿಸಿದರೆ ವಚನ ಪುಸ್ತಕಗಳನ್ನು ಕಳಿಸಲಾಗುತ್ತದೆ. 

SHARANU VISHWA VACHANA FOUNDATION 
A/C NO. 5192000100032101 
IFSC CODE KARB0000519 
KARNATAKA BANK 
BOGADI BRANCH, MYSORE 

ಗೂಗಲ್ ಪೇ ಅಥವಾ ಪೋನ್ ಪೇ ನಂಬರ್ 
8217081644 

ಹೆಚ್ಚಿನ ಮಾಹಿತಿಗಾಗಿ ಶರಣು ವಿಶ್ವವಚನ ಫೌಂಡೇಷನ್ 
ನಂ. 431, 7ನೇ ಮುಖ್ಯರಸ್ತೆ, 14 ನೇ ಅಡ್ಡರಸ್ತೆ 
ಶಾರದಾನಗರ ರೈಲ್ವೆ ಬಡಾವಣೆ
ಬೋಗಾದಿ ಮೈಸೂರು – 570026 
ಮೊಬೈಲ್ ನಂಬರ್ 8217081644 

ತಮ್ಮ ಸದಸ್ಯತ್ವದ ವಿವರವನ್ನು ಕೆಳಗಿನ ಗೂಗಲ್ ಲಿಂಕ್ ಬಳಸಿ ಭರ್ತಿ ಮಾಡಬಹುದು. 

https://forms.gle/yCYqnXFQcTWnubAf9 

ಸದಸ್ಯತ್ವ ಪಡೆದರೆ ದೊರೆಯುವ ಪ್ರಯೋಜನಗಳು 

ಅಂತರ್ಜಾಲ ಪ್ರವಚನ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಪ್ರತೀ ಭಾನುವಾರ ಗೂಗಲ್ ಮೀಟ್ ನಲ್ಲಿ ಗುರುಗಳು ಹಾಗೂ ವಚನ ಸಾಹಿತ್ಯದ ಬಗ್ಗೆ ಹೆಚ್ಚು ಜ್ಞಾನವಿರುವ ಅನುಭಾವಿಗಳಿಂದ ಪ್ರವಚನ ಇರುತ್ತದೆ ಅದನ್ನು ವೀಕ್ಷಿಸಬಹುದು ಹಾಗೂ ಆ ಕಾರ್ಯಕ್ರಮದಲ್ಲಿ ತಾವೂ ಕೂಡಾ ವಚನಗೀತೆ ಹಾಡಬಹುದು. ಸ್ವಾಗತ ಮತ್ತು ವಂದನಾರ್ಪಣೆ ಮಾಡಬಹುದು. ಇದುವರೆಗೆ 20 ಪ್ರವಚನಗಳು ಆಗಿರುತ್ತವೆ. *ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಇದುವರೆಗೆ ನಡೆದಿರುವ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನಗಳ ಪತ್ರಿಕಾ ಸುದ್ಧಿ* https://sharanuvishwa.blogspot.com/2020/08/blog-post_31.html ವಚನ ಮಾಧುರ್ಯ ಪ್ರತೀ ಗುರುವಾರ ವಚನ ಮಾಧುರ್ಯ ಕಾರ್ಯಕ್ರಮ ಇರುತ್ತದೆ. ಇದು ವಾರದಿಂದ ವಾರಕ್ಕೆ ವಿಭಿನ್ನವಾಗಿರುತ್ತದೆ ಇದುವರೆಗೆ 1. ಮಹಿಳೆಯರಿಂದ ವಚನ ಮಾಧುರ್ಯ 2. ಖ್ಯಾತ ಗಾಯಕರು ಮತ್ತು ವಿಮರ್ಶಕರಿಂದ ವಚನ ಮಾಧುರ್ಯ 3. ಚಿಣ್ಣರಿಂದ ವಚನ ಮಾಧುರ್ಯ 4. ವಿಶೇಷ ಚೇತನರಿಂದ ವಚನ ಮಾಧುರ್ಯ 5. ಮೂರು ತಲೆ ಮಾರಿನವರಿಂದ ವಚನ ಮಾಧುರ್ಯ 6. ದಂಪತಿಗಳಿಂದ ವಚನ ಮಾಧುರ್ಯ 7. ಶಿಕ್ಷಕರಿಂದ ವಚನ ಮಾಧುರ್ಯ 8. ವಚನ ನೃತ್ಯ 9. ವಿದೇಶದಲ್ಲಿರುವ ಕನ್ನಡಿಗರಿಂದ ವಚನ ಮಾಧುರ್ಯ 10. ಜನಪ್ರತಿನಿಧಿಗಳಿಂದ ವಚನ ಮಾಧುರ್ಯ 11. ವಕೀಲರಿಂದ ವಚನ ಮಾಧುರ್ಯ 12. ರೈತರಿಂದ ವಚನ ಮಾಧುರ್ಯ 13. ಆರಕ್ಷಕರಿಂದ ವಚನ ಮಾಧುರ್ಯ 14. ವೈದ್ಯರಿಂದ ವಚನ ಮಾಧುರ್ಯ ಈ ಕಾರ್ಯಕ್ರಮಗಳಲ್ಲಿ ತಾವೂ ಭಾಗಿಯಾಗಬಹುದು. ಜೊತೆಗೆ ಕಾರ್ಯಕ್ರಮದ ಒಂದು ಭಾಗವಾಗಿ ತಾವು ವಚನಗೀತೆ ಹಾಡಬಹುದು. ಸ್ವಾಗತ ಅಥವಾ ವಂದನಾರ್ಪಣೆ ಮಾಡಬಹುದು. *ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಇದುವರೆಗೆ ನಡೆದಿರುವ ವಚನ ಮಾಧುರ್ಯ ಕಾರ್ಯಕ್ರಮಗಳ ಪತ್ರಿಕಾ ವರದಿ ನೋಡಲು ಕೆಳಗಿನ ಲಿಂಕ್ ಪ್ರೆಸ್ ಮಾಡಿ* https://sharanuvishwa.blogspot.com/2020/08/blog-post_2.html 


No comments:

Post a Comment