🙏ಓಂ ಶ್ರೀ ಗುರುಬಸವಲಿಂಗಾಯ ನಮಃ🙏
✍ಅಲ್ಲಮಪ್ರಭುದೇವರ ವಚನ✍
ಮಾಮರದೊಳಗೊಂದು ಮಾಯದ ಮಂಜು ಕವಿದಡೆ
ಹೂ ಮಿಡಿ ಫಲಂಗಳು ಉದುರವಿನ್ನೆಂತೊ?
ಮಂಜಿನ ರಸವನುಂಡು ಫಲ ನಿಮಿರ್ದು ಬೆಳೆದಡೆ
ಆ ಫಲವ ನಾನು ಮುಟ್ಟೆನು ಕಾಣಾ ಗುಹೇಶ್ವರಾ.
ತಾತ್ಪರ್ಯ
ಮನಸ್ಸೆಂಬ ಮಾಮರವನ್ನು ಮೋಹರೂಪ ಮಾಯೆಯ ಮಂಜು ಮುಸುಕಿದರೆ ಆ ಮನದೊಳಗೆ ಬೆಳೆದಿರುವ ಸುಖ-ದುಃಖ-ಮಿಶ್ರ ಎಂಬ ಹೂ-ಮಿಡಿ- ಎಂಬ ಹೂ-ಮಿಡಿ- ಫಲಂಗಳು ಉದುರಿ ಹೋಗುವ ಬದಲು ಆ ಮಂಜಿನ ರಸವನ್ನೆ ಕುಡಿದು ಹುಲುಸಾಗಿ ಬೆಳೆಯುತ್ತವೆ. ಇದು ನಿಜವಾಗಿಯೂ ಅತ್ಯಂತ ಅಚ್ಚರಿಯ ಮಾತು. ಹೀಗೆ ಆ ಮೋಹದ ರಸವನುಂಡು ಬೆಳೆದ ಫಲಗಳನ್ನು ಶರಣನು ಸ್ಪರ್ಶಿಸುವುದೆ ಇಲ್ಲ. ಆತ ಮೋಹದ ಮಂಜು ಇಲ್ಲದವ, ಮನದ ವಿಕಾರಗಳನ್ನು ಅಳಿದವ. ಅವನ ಮನಸ್ಸು ಶಾಂತ. ಅದರ ಫಲವೆ ಶಿವಾನುಭೂತಿ. ಶರಣ ಆ ಅನುಭೂತಿಯ ಸವಿಯನ್ನು ಸವಿದು ಆನಂದಿಸುತ್ತಾನೆ.
☘ತಾತ್ಪರ್ಯ ಕೃಪೆ: ಶ್ರೀ ಸಿದ್ಧೇಶ್ವರ ಶ್ರೀಗಳು☘
ಧ್ವನಿ: ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ
🌎ಶರಣು ವಿಶ್ವವಚನ ಫೌಂಡೇಷನ್🌎
✍ಅಲ್ಲಮಪ್ರಭುದೇವರ ವಚನ✍
ಮಾಮರದೊಳಗೊಂದು ಮಾಯದ ಮಂಜು ಕವಿದಡೆ
ಹೂ ಮಿಡಿ ಫಲಂಗಳು ಉದುರವಿನ್ನೆಂತೊ?
ಮಂಜಿನ ರಸವನುಂಡು ಫಲ ನಿಮಿರ್ದು ಬೆಳೆದಡೆ
ಆ ಫಲವ ನಾನು ಮುಟ್ಟೆನು ಕಾಣಾ ಗುಹೇಶ್ವರಾ.
ತಾತ್ಪರ್ಯ
ಮನಸ್ಸೆಂಬ ಮಾಮರವನ್ನು ಮೋಹರೂಪ ಮಾಯೆಯ ಮಂಜು ಮುಸುಕಿದರೆ ಆ ಮನದೊಳಗೆ ಬೆಳೆದಿರುವ ಸುಖ-ದುಃಖ-ಮಿಶ್ರ ಎಂಬ ಹೂ-ಮಿಡಿ- ಎಂಬ ಹೂ-ಮಿಡಿ- ಫಲಂಗಳು ಉದುರಿ ಹೋಗುವ ಬದಲು ಆ ಮಂಜಿನ ರಸವನ್ನೆ ಕುಡಿದು ಹುಲುಸಾಗಿ ಬೆಳೆಯುತ್ತವೆ. ಇದು ನಿಜವಾಗಿಯೂ ಅತ್ಯಂತ ಅಚ್ಚರಿಯ ಮಾತು. ಹೀಗೆ ಆ ಮೋಹದ ರಸವನುಂಡು ಬೆಳೆದ ಫಲಗಳನ್ನು ಶರಣನು ಸ್ಪರ್ಶಿಸುವುದೆ ಇಲ್ಲ. ಆತ ಮೋಹದ ಮಂಜು ಇಲ್ಲದವ, ಮನದ ವಿಕಾರಗಳನ್ನು ಅಳಿದವ. ಅವನ ಮನಸ್ಸು ಶಾಂತ. ಅದರ ಫಲವೆ ಶಿವಾನುಭೂತಿ. ಶರಣ ಆ ಅನುಭೂತಿಯ ಸವಿಯನ್ನು ಸವಿದು ಆನಂದಿಸುತ್ತಾನೆ.
☘ತಾತ್ಪರ್ಯ ಕೃಪೆ: ಶ್ರೀ ಸಿದ್ಧೇಶ್ವರ ಶ್ರೀಗಳು☘
ಧ್ವನಿ: ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ
🌎ಶರಣು ವಿಶ್ವವಚನ ಫೌಂಡೇಷನ್🌎
No comments:
Post a Comment