Sunday, May 19, 2019

Vachana Kumaraswamy Award and honour











































18 ಮೇ 2019 ರಂದು ಮಂಡ್ಯದ ಗಾಂಧಿಭವನದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದಿಂ ಏರಗಪಡಿಸಿದ್ದ ಮನೆಮನೆಗೆ ಸೌಹಾರ್ದ ಬಸವಜ್ಯೋತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪ್ರಯುಕ್ತ ಅಭಿನಂದಿಸಲಾಯಿತು.
                          ..............

19 ಮೆ 2019 ರಂದುಬೆಂಗಳೂರಿನ ನಾಯಂಡಹಳ್ಳಿ ಶ್ರೀ ಮಲೆಮಹದೇಶ್ವರ ಸೇವಾಸಮಿತಿಯವರು ಅಲ್ಲಿನ ಕಛೇರಿಗೆ ಭೇಟಿನೀಡಿದಾಗ ಆತ್ಮೀಯವಾಗಿ ದಂಪತಿಗಳನ್ನು ಅಭಿನಂದಿಸಿದ ಸಂದರ್ಭ
                                  ................
5 ಜೂನ್ 2019 ರಂದು ಕೊಳ್ಳೇಗಾಲ ಲಯನ್ಸ್ ಕಮ್ಯುನಿಟಿ ಹಾಲ್ ನಲ್ಲಿ ನಡೆದ ಚಾಮರಾಜನಗರ ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಘಟಕದ ಉದ್ಘಾಟನೆಗೆ ಆಗಮಿಸಿದ್ದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿರವರನ್ನು ಅಭಿನಂದಿಸಲಾಯಿತು.

ವಚನ ಸಾಹಿತ್ಯವನ್ನು ದೇಶ ವಿದೇಶಗಳಲ್ಲಿ ಪ್ರಸಾರ ಮಾಡುತ್ತಿರುವ ಶರಣು ವಿಶ್ವವಚನ ಫೌಂಡೇಷನ್   ಅಂತರಾಷ್ಟ್ರೀಯ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಪಡುವಲು ಮಠದ ಮಹದೇವಸ್ವಾಮೀಜಿ ಹೇಳಿದರು. ಸರಗೂರು ತಾಲ್ಲೂಕು ಕಾಟವಾಳು ಗ್ರಾಮದ ಹುಲಿಮಾಸ್ತಮ್ಮನವರ ದೇವಸ್ಥಾನ, ಈಶ್ವರ ದೇವಸ್ಥಾನ ಮತ್ತು ಜಾತ್ರಾ ಮಹೋತ್ಸವದ ಸಮಾರಂಭದಲ್ಲಿ  ವಚನ ಕುಮಾರಸ್ವಾಮಿಯವರಿಗೆ ಅಭಿನಂದಿಸಿ ಮಾತನಾಡಿದ ಅವರು ಸಂಸ್ಥೆ ಸ್ಥಾಪಿಸಿ ಅದರ ಮೂಲಕ 10 ರಾಜ್ಯ ಹಾಗೂ 15 ದೇಶಗಳಲ್ಲಿ ಕರ್ನಾಟಕದಿಂದ ಹೋಗಿ ನೆಲೆಸಿರುವವರನ್ನು ಅಂತರ್ಜಾಲದ ಮೂಲಕ ಒಂದುಗೂಡಿಸಿ ಅವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅದರಲ್ಲೂ ವಚನಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಿ ಕನ್ನಡಾಭಿಮಾನವನ್ನು   ಮೂಡಿಸುವುದರ ಜೊತೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಘಟಕಗಳನ್ನು ಸ್ಥಾಪಿಸಿ ಶಾಲೆಗಳೆಡೆಗೆ ವಚನಗಳ ನಡಿಗೆ ಹಾಗೂ ವಚನಗ್ರಾಮ ಕಾರ್ಯಕ್ರಮಗಳನ್ನು ಶಾಲೆ ಮತ್ತು ಗ್ರಾಮಗಳಲ್ಲಿ ನಡೆಸಿ ಸಂಸ್ಕಾರದ ಬೆಳಕನ್ನು ಹರಡುತ್ತಿರುವುದು ಸ್ತುತ್ಯಾರ್ಹವಾದುದು ಎಂದರು.  ಈ  ಸಂದರ್ಭದಲ್ಲಿ  ಹಂಚೀಪುರ ಮಠದ ತೋಂಟದಾರ್ಯಸ್ವಾಮೀಜಿ, ಸರಗೂರು ತಾ.ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಡಿ.ಜಿ.ಶಿವರಾಜು, ಕಾಟವಾಳು ಗ್ರಾಮದ ಬಸಪ್ಪ, ಮಲ್ಲಪ್ಪ ಮುತ್ತುರಾಜು ಉಪಸ್ಥಿತರಿದ್ದರು.
ಎಚ್ ಡಿ ಕೋಟೆ : ವಚನಸಾಹಿತ್ಯದ ಶ್ರೀಮಂತಿಗೆ ನೂರಾರು ಶರಣರು ಶ್ರಮಿಸಿದ್ದಾರೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ.ವಚನ ಕುಮಾರಸ್ವಾಮಿ ಹೇಳಿದರು. ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಪುರ ಗ್ರಾಮದ ಬಸವೇಶ್ವರ ಮಠದಲ್ಲಿ  ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪಡೆದುದರ ಫಲವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಅಕ್ಷರ ಸಂಸ್ಕøತಿಯಿಂದ ವಂಚಿತರಾದ ಅನೇಕರು ಅನುಭವಮಂಟಪದ ಮೂಲಕ ಸಾಕ್ಷರರಾಗಿ ವಚನ ರಚಿಸಿ ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದರು. ರೈತರು ಕಾರ್ಮಿಕರು ತಮ್ಮ ವೈಚಾರಿಕ ಚಿಂತನೆಗಳಿಗೆ ಅಕ್ಷರ ರೂಪ ನೀಡಿದುದನ್ನು ಕಾಣಬಹುದು.  ವಚನಕಾರರನ್ನು ನಾವು ನಮ್ಮ ಆದರ್ಶ ವ್ಯಕ್ತಿಗಳನ್ನಾಗಿ ಸ್ವೀಕರಿಸಿ ಅವರು ರಚಿಸಿರುವ ವಚನಗಳಲ್ಲಿ ಕಂಡುಬರುವ ಪ್ರಮುಖ ಅಂಶಗಳಾದ ಮೌಡ್ಯ ನಿರಾಕರಣೆ, ಭ್ರμÁ್ಟಚಾರ ನಿರ್ಮೂಲನೆ, ಸಹೋದರತೆ ಇವುಗಳನ್ನು ಅಳವಡಿಸಿಕೊಂಡಿದ್ದೇ ಆದರೆ ಪ್ರತೀ ಗ್ರಾಮಗಳು ಮಾದರಿ ಗ್ರಾಮಗಳಾಗಿ ರೂಪುಗೊಳ್ಳುತ್ತವೆ ಎಂದರು. ಕಾರ್ಯಕ್ರಮದಲ್ಲಿ ಶ್ರೀಮಠದ ಬಸವಣ್ಣಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಪಿ.ಕೆ. ಶಿವರಾಜು, ಶಿವರುದ್ರಪ್ಪ, ಪಿ.ಮಹದೇವಪ್ಪ, ಪಿ.ಆರ್.ಮುದ್ದರಾಮಪ್ಪ, ಬಸವರಾಜಪ್ಪ, ಪಿ.ಆರ್.ಸಿದ್ಧರಾಮಪ್ಪ, ಹರದನಹಳ್ಳಿ ಮಹದೇವಪ್ಪ ಉಪಸ್ಥಿತರಿದ್ದರು.

ಚಿತ್ರಸುದ್ಧಿ: ಮೈಸೂರು ಉತ್ತರವಲಯದ ಕ್ಷೇತ್ರಶಿಕ್ಷಣಾಧಿಕಾರಿ ಮತ್ತು ಕ್ಷೇತ್ರಸಂಪನ್ಮೂಲ ಸಮನ್ವಯಾಧಿಕಾರಿಗಳ ವತಿಯಿಂದ ಗೌರವ ಡಾಕ್ಷರೇಟ್ ಪಡೆದ ಕ್ಷೇತ್ರಸಂಪನ್ಮೂಲ ವ್ಯಕ್ತಿ ಸಿ.ಎಸ್. ಕುಮಾರಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸಲಾಯಿತು. ಸಂದರ್ಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಡಿ ಉದಯಕುಮಾರ್, ಕ್ಷೇತ್ರಸಂಪನ್ಮೂಲ ಸಮನ್ವಯಾಧಿಕಾರಿ .ಜೆ. ಸೋಮಶೇಖರ್, ದೈಹಿಕ ಶಿಕ್ಷಣ ಪರಿವೀಕ್ಷಕ ಸಿದ್ಧರಾಜು, ವ್ಯವಸ್ಥಾಪಕ ವಾಸುಕೀಶ್, ಸೂಪರಿಡೆಂಟ್ ನಾರಾಯಣ್, ಗಣೇಶ್, ಬಿ.ಆರ್.ಪಿ ಗಳಾದ ನರೇಂದ್ರ, ಶಂಕರ್, ಶುಭ, ಫ್ಲೋರಾ ಜಯಂತಿ, ಶಿಕ್ಷಣ ಸಂಯೋಜಕರಾದ ಮಂಜುನಾಥ್, ನಾಗೇಂದ್ರ, ಸಿ.ಆರ್.ಪಿ, ಬಿ ಆರ್ ಟಿ ಹಾಗೂ ಕಛೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.

No comments:

Post a Comment