1. ಹಾವಿನ ಡೊಂಕು ಹುತ್ತಕ್ಕೆ ಸಸಿನ,
ನದಿಯ ಡೊಂಕು ಸಮುದ್ರಕ್ಕೆ ಸಸಿನ,
ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ.
ಹಾವಿನ ದೇಹ ಡೊಂಕಾಗಿದ್ದು ಹುತ್ತವನ್ನು ಪ್ರವೇಶಿಸಲು ಆ ಡೊಂಕೇ ವರವಾಗಿ ಪರಿಣಮಿಸಿದೆ. ನದಿಯು ನೇರಮಾರ್ಗದಲ್ಲಿ ಹರಿಯದೆ ಅಂಕುಡೊಂಕಾಗಿ ಚಲಿಸುತ್ತದೆ. ಆ ಅಂಕು ಡೊಕು ಚಲನೆಯೇ ಸಮುದ್ರವನ್ನು ಸೇರಲು ನೆರವಾಗುತ್ತದೆ. ಹಾಗೆಯೇ ಶರಣರ ಮಾತು ನಡೆ ನುಡಿಗಳು ಲೋಕದ ಜನರಿಗೆ ವಿಚಿತ್ರವಾಗಿ ಕಾಣಬಹದು. ಆದರೆ ಲಿಂಗದೇವನನ್ನು ಒಲಿಸಿಕೊಳ್ಳಲು ಅದು ಸಸಿನವಾಗಿದೆ ಅಂದರೆ ಸಮ್ಮತವಾಗಿದೆ. ಆದುದರಿಂದ ಶರಣರ ಬದುಕು ಹೊರನೋಟಕ್ಕೆ ಅತಿರೇಕವಾಗಿ ಕಂಡರೂ ಆಂತರಿಕ ನಿಲುವಿನ ದೃಷ್ಟಿಯಿಂದ ಸಹಜವಾದುದಾದ್ದರಿಂದ ಪರಿಮಿತ ದೃಷ್ಟಿಯ ಗುಣಗಳನ್ನು ಹುಡುಕಬಾರದು ಎಂಬುದೇ ಈ ವಚನದ ಆಶಯ
_____
ನದಿಯ ಡೊಂಕು ಸಮುದ್ರಕ್ಕೆ ಸಸಿನ,
ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ.
ಹಾವಿನ ದೇಹ ಡೊಂಕಾಗಿದ್ದು ಹುತ್ತವನ್ನು ಪ್ರವೇಶಿಸಲು ಆ ಡೊಂಕೇ ವರವಾಗಿ ಪರಿಣಮಿಸಿದೆ. ನದಿಯು ನೇರಮಾರ್ಗದಲ್ಲಿ ಹರಿಯದೆ ಅಂಕುಡೊಂಕಾಗಿ ಚಲಿಸುತ್ತದೆ. ಆ ಅಂಕು ಡೊಕು ಚಲನೆಯೇ ಸಮುದ್ರವನ್ನು ಸೇರಲು ನೆರವಾಗುತ್ತದೆ. ಹಾಗೆಯೇ ಶರಣರ ಮಾತು ನಡೆ ನುಡಿಗಳು ಲೋಕದ ಜನರಿಗೆ ವಿಚಿತ್ರವಾಗಿ ಕಾಣಬಹದು. ಆದರೆ ಲಿಂಗದೇವನನ್ನು ಒಲಿಸಿಕೊಳ್ಳಲು ಅದು ಸಸಿನವಾಗಿದೆ ಅಂದರೆ ಸಮ್ಮತವಾಗಿದೆ. ಆದುದರಿಂದ ಶರಣರ ಬದುಕು ಹೊರನೋಟಕ್ಕೆ ಅತಿರೇಕವಾಗಿ ಕಂಡರೂ ಆಂತರಿಕ ನಿಲುವಿನ ದೃಷ್ಟಿಯಿಂದ ಸಹಜವಾದುದಾದ್ದರಿಂದ ಪರಿಮಿತ ದೃಷ್ಟಿಯ ಗುಣಗಳನ್ನು ಹುಡುಕಬಾರದು ಎಂಬುದೇ ಈ ವಚನದ ಆಶಯ
_____
No comments:
Post a Comment