Thursday, November 3, 2022

ಶಾಸನ- ಬಸವಣ್ಣ


 #ಹಾಲಬಸವಿದೇವನಶಾಸನ

       ಅಣ್ಣ ಬಸವಣ್ಣನ ವಂಶಾವಳಿ,ಬಸವಣ್ಣ ಮಾದರಸರ ಮಗ ಮತ್ತು ಅವರು ಹುಟ್ಟಿದ್ದು ಬಾಗೇವಾಡಿಯಲ್ಲಿಯೇ ಎಂದು ತಿಳಿಸುವ ಅತ್ಯಂತ ಮಹತ್ವದ ಕನ್ನಡ ಶಾಸನವಿದು


#   ಯುಗಪುರುಷರಾದ ಮಹಾತ್ಮ ಬಸವೇಶ್ವರ ರ ಕುರಿತು ಸಾಕಷ್ಟು ಸಾಹಿತ್ಯಿಕ ದಾಖಲೆಗಳು(ವಚನಗಳು,ರಗಳೆಗಳು,ಕಾವ್ಯಗಳು,ಜನಪದ) ಲಭಿಸಿದರೂ ಸಹ ದಾಖಲಿಸುವ ದಾಖಲೆಗಳಾದ ಶಾಸನ,ತಾಮ್ರಪಟ,ಸ್ಮಾರಕಗಳು ಇಲ್ಲದಿರುವುದು #ಬಸವಣ್ಣನ ಕುರಿತು ಖಚಿತವಾಗಿ ಹೇಳಲು ಯಾವ ದಾಖಲೆಗಳು ಲಭ್ಯವಿರಲಿಲ್ಲ


# ಅಂತಹ ಸಮಯದಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ #ಅರ್ಜುನವಾಡ ದಲ್ಲಿ ಈ ಹಾಲಬಸವಿದೇವರ ಶಾಸನ ಲಭಿಸಿತು


# ಈ ಶಾಸನದಲ್ಲಿ ಬಸವಣ್ಣನವರನ್ನು ಬಸವರಾಜ ಮತ್ತು ಸಂಗನಬಸವ ಎಂದು ಉಲ್ಲೇಖಿಸಲಾಗಿದೆ

#ಈ ಶಾಸನವನ್ನು ಸಂಶೋಧಿಸಿದವರು ಶ್ರೀ ರಾಜಪುರೋಹಿತ,ಎಸ್ ಸಿ ನಂದೀಮಠ ಮತ್ತು ಗೆಳಯರ ಬಳಗದ ಮಧುರಚೆನ್ನರು,ಶ್ರೀಯುತರು ಇದನ್ನು ಕನ್ನಡ ವಚನ ಪಿತಾಮಹ ಎಂದು ಖ್ಯಾತರಾದ ಫ.ಗು.ಹಳಕಟ್ಟಿಯವರ ಶಿವಾನುಭವ ಪತ್ರಿಕೆಯಲ್ಲಿ 1928 ರಲ್ಲಿ ಹೊರಡಿಸಲಾಯಿತು. ಈ ಮೂಲಕ ಬಸವಣ್ಣನವರ ಜೀವನದ ಕುರಿತು ಬೆಳಕು ಚೆಲ್ಲುವ ಒಂದು ಐತಿಹಾಸಿಕ ದಾಖಲೆ ದೊರೆದಂತಾಯಿತು.


#ಇಂದು ಈ ಐತಿಹಾಸಿಕ ಶಾಸನ ಧಾರವಾಡ ಜಿಲ್ಲೆಯ ಖ್ಯಾತ ವಿ.ವಿಗಳಲ್ಲಿ ಒಂದಾದ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದವರು ಸಂಗ್ರಹಿಸಿರುವ ಕನ್ನಡ ಸಂಶೋಧನಾ ಕೇಂದ್ರದ ಮ್ಯೂಸಿಯಂನಲ್ಲಿ ಅತ್ಯಂತ ಸುರಕ್ಷಿತವಾಗಿ ಸಂರಕ್ಷಿಸಿ ಇಡಲಾಗಿದೆ.


# ಈ ಶಾಸನವನ್ನು ದೇವಗಿರಿಯ ಯಾದವರ ಪ್ರಧಾನಮಂತ್ರಿಯಾದ ನಾಗರಾಜನು ಹೊರಡಿಸಿರುವ ದತ್ತಿ ಶಾಸನವಾಗಿದ್ದು 80  ಸಾಲುಗಳನ್ನು ಒಳಗೊಂಡಿದೆ.

#ಇಂತಹ ಐತಿಹಾಸಿಕ ಶಾಸನವನ್ನು ಕಣ್ತುಂಬಿಕೊಳ್ಳಬೇಕು ಎನ್ನುವರು ಧಾರವಾಡಕ್ಕ ಬಂದರ ಕರ್ನಾಟಕ ವಿವಿಗೆ ಬಂದು ಈ ಮ್ಯೂಸಿಯಂಗೆ ಹೋಗೋದು ಮಾತ್ರ ಮರಿಬೇಡ್ರಿ


 #ಇತಿಹಾಸವನ್ನು_ಮರೆತವರು_ಇತಿಹಾಸವನ್ನು_ಸೃಷ್ಟಿಸಲಾರರು

#ಬಸವಣ್ಣ #ಧಾರವಾಡ #ಹುಬ್ಬಳ್ಳಿ #ಕರ್ನಾಟಕ #ವಿಶ್ವವಿದ್ಯಾಲಯ

No comments:

Post a Comment