Wednesday, November 2, 2022

ವಿವಿಧ ಶರಣರ ವಚನಗಳ ತಾತ್ಪರ್ಯಗಳು

 *ವಚನ ಬೆಳಕು*

 *ಮಿಂದು ದೇವರ ಪೂಜಿಸಿಹೆನೆಂಬ* *ಸಂದೇಹಿ ಮಾನವಾ ನೀ ಕೇಳಾ,* 

*ಮಿಯದೇ ಮೀನು🐟? ಮಿಯದೇ ಮೊಸಳೆ🐊?*

*ತಾ ಮಿಂದು, ತನ್ನ ಮನ ಮಿಯದನ್ನಕ್ಕರ?*

*ಈ ಬೆಡಗಿನ ಮಾತ ಮೆಚ್ಚುವನೆ*

*ನಮ್ಮ ಗುಹೇಶ್ವರ?*

   ✍️:*ಅಲ್ಲಮ ಪ್ರಭುಗಳು*🙏

*ವಚನ ಭಾವಾರ್ಥ:* ಅಂತರಂಗದ ಶುದ್ಧಿಯಿಲ್ಲದೆ, ಸದ್ಭಾವ ಇಲ್ಲದೆ,ಒಳ್ಳೆಯ ಮನವಿಲ್ಲದೆ,  ಕೇವಲ ಸ್ನಾನ ಮಾಡಿ, ನೀರಿನಲ್ಲಿ ಮುಳುಗಿ ಮಡಿಯಾದೆ  ಶುದ್ಧನಾದೆ,ದೇವರನ್ನು ಪೂಜಿಸಲು ನಾನು ಅರ್ಹ  ಎನ್ನುವ ಮಾನವರನ್ನು  ಸಂದೇಹಿಗಳು  ಎಂದು ಅಲ್ಲಮಪ್ರಭುಗಳು  ಹೇಳುತ್ತಾರೆ. ಜಲಚರಗಳಾದ ಮೀನು ಮೊಸಳೆಗಳು🐟🐊 ಯಾವಾಗಲು ನೀರಿನಲ್ಲೇ ಇರುತ್ತವೆ ಎಂದು ಅವುಗಳೂ ಭಕ್ತರಾಗುತ್ತಾವ? ಬಹಿರಂಗ ಶುದ್ದಿಗಿಂತ  ಅಂತರಂಗ ಶುದ್ಧಿ ಮುಖ್ಯ ಎನ್ನುತ್ತಾರೆ ಅಲ್ಲಮ ಪ್ರಭುಗಳು. 🙏🙏🙏🙏

No comments:

Post a Comment