Wednesday, January 11, 2023

ಜಗನ್ಮಾತೆ ಅಕ್ಕಮಹಾದೇವಿ

 

ಮೈಸೂರು  : ಕನ್ನಡದ ಮಹಿಳಾ ಸಾಹಿತ್ಯ ಲೋಕವನ್ನು ಪ್ರಥಮವಾಗಿ ಬೆಳಗಿದವರು ಜಗನ್ಮಾತೆ ಅಕ್ಕಮಹಾದೇವಿ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು. ಮೈಸೂರಿನ ವಿಜಯನಗರ ಮೂರನೇ ಹಂತದಲ್ಲಿ ಶಾಶ್ವತಿ ಮಹಿಳಾ ಬಳಗದ ವತಿಯಿಂದ ಪ್ರೊ. ಶೈಲಾ ನಾಗರಾಜ್‌ರವರ ಮನೆಯಂಗಳದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ‘ಜಗವ ಬೆಳಗಿದ ಅಕ್ಕ’ ಎಂಬ ವಿಷಯದ ಬಗ್ಗೆ ಪ್ರವಚನ ನೀಡಿ ಮಾತನಾಡಿದ ಅವರು ಮಹಿಳೆ ಎಂದರೆ ಕೀಳಾಗಿ ಕಾಣುತ್ತಿದ್ದ ಕಾಲಘಟ್ಟದಲ್ಲಿ ಬಸವಣ್ಣನವರು ಅನುಭವಮಂಟಪ ಸ್ಥಾಪಿಸಿ ಮಹಳೆಯರಿಗೆ ಸ್ಥಾನಮಾನ ಕಲ್ಪಿಸಿಕೊಡುವುದರ ಮೂಲಕ ೩೩ ಮಹಿಳೆಯರು ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಲು ಸಾಧ್ಯವಾಯಿತು. ಉಡುತಡಿಯಲ್ಲಿ ಜನಿಸಿದ ಅಕ್ಕಮಹಾದೇವಿ ಚಿಕ್ಕಂದಿನಲ್ಲೇ ಅನೇಕ ನೋವುಗಳನ್ನು ಅನುಭವಿಸಿ, ಮದುವೆಯಾಗಲು ಬಯಸಿದ ಕೌಶಿಕ ರಾಜನನ್ನು ತಿರಸ್ಕರಿಸಿ ನಂತರ ಬಸವಕಲ್ಯಾಣಕ್ಕೆ ಹೋಗಿ ಅನುಭವಮಂಟಪದಲ್ಲಿ ಅಲ್ಲಮಪ್ರಭುಗಳ ಎಲ್ಲಾ ಪ್ರಶ್ನೆಗಳಿಗೆ ದಿಟ್ಟತನದಿಂದ ಉತ್ತರಿಸಿ ವಿಶ್ವಕುಲದ ಸ್ತೀ ಜ್ಯೋತಿ ಎಂದು ಹೊಗಳಿಸಿಕೊಂಡರು. ತದನಂತರ ಆಂದ್ರಪ್ರದೇಶದ ಶ್ರೀಶೈಲ ಕದಳಿವನದಲ್ಲಿ ಐಕ್ಯರಾದರು. ಅಕ್ಕನ ವಚನಗಳು ಇಂದಿನ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿ ಎಂದರು. ನಂತರ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಹಿಳೆಯರಿಗೆ ನಿಜವಾಗಿ ಸ್ವಾತಂತ್ರö್ಯ ಸಿಕ್ಕಿದ್ದು ಹನ್ನೆರಡನೆಯ ಶತಮಾನದಲ್ಲಿ. ಕನ್ನಡದ ಮೊಟ್ಟ ಮೊದಲ ಕವಯತ್ರಿಯಾಗಿ ಅಕ್ಕ ರಚಿಸಿದ ವಚನಗಳು ಸಾರ್ವಕಾಲಿಕ ಸತ್ಯವಾಗಿವೆ. ಚಿನ್ಮಯಜ್ಞಾನಿ ಚನ್ನಬಸವಣ್ಣ ಅಕ್ಕನ ಒಂದು ವಚನ ಅಜಗಣ್ಣನ ಐದು ವಚನಕ್ಕೆ, ಪ್ರಭುದೇವರ ಹತ್ತು ವಚನಕ್ಕೆ, ಬಸವಣ್ಣನವರ ಇಪ್ಪತ್ತು ವಚನಕ್ಕೆ, ಜೇಡರ ದಾಸಿಮಯ್ಯನವರ ಅರವತ್ತು ವಚನಕ್ಕೆ ಸಮ ಎಂದು ಹೇಳಿರುವುದನ್ನು ನೋಡಿದರೆ ಅಕ್ಕನ ಪಾಂಡಿತ್ಯ ಮತ್ತು ಅನುಭಾವಿಕ ನಿಲವಿನ ಪ್ರೌಢಿಮೆ ಮಹತ್ತರವಾದುದು ಎಂದರು. ಕಾರ್ಯಕ್ರಮದಲ್ಲಿ ದಾಕ್ಷಾಯಿಣಿ ಪ್ರಾರ್ಥಿಸಿದರು. ಶಾಶ್ವತಿ ಮಹಿಳಾ ಬಳಗದ ಸಂಸ್ಥಾಪಕಿ ಪ್ರೊ. ಶೈಲಾ ನಾಗರಾಜ್ ಉಪಸ್ಥಿತರಿದ್ದರು.


No comments:

Post a Comment