ಬಸವೇಶ್ವರ ವಚನ ದೀಪಿಕೆ
ವಚನಗಳು ಮಹಾಲಿಂಗದ ಬೆಳಕು
ಶಿವಯೋಗದ ಸಾಧನ
ಪರಮಶಾಂತಿಯ ಪ್ರಕಾಶ
ಅನುಭಾವದ ನೆಲೆಯಲ್ಲಿ ಬರೆದಿರುವ ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡಿದಷ್ಟೂ ನಮ್ಮ ಸಂಸ್ಕಾರ ಪ್ರಕಾಶಮಾನವಾಗುವುದರ ಜೊತೆಗೆ ಜ್ಞಾನ ದಾಹವನ್ನು ಹೋಗಲಾಡಿಸುತ್ತವೆ.
ಡಾ.ಎಚ್. ತಿಪ್ಪೇರುದ್ರಸ್ವಾಮಿರವರು ಬಸವಣ್ಣನವರ 959 ವಚನಗಳಿಗೆ ನಿರ್ವಚನ ಮಾಡಿದ್ದಾರೆ ಅಲ್ಲದೇ ವಚನಗಳಲ್ಲಿ ಬರುವ 71 ಸಾಂದರ್ಭಿಕ ಕಥೆಗಳ ವಿವರವನ್ನು ಕೊಡುವುದರ ಜೊತೆಗೆ, ವಿಶೇಷ ಪದಕೋಶ, ಕಠಿಣ ಶಬ್ದಕೋಶ,ವಿಶಿಷ್ಟ ಪದಸೂಚಿ, ವಚನಗಳ ಆಕಾರಾದಿಸೂಚಿ ಒಳಗೊಂಡಿದ್ದು ಸಾಹಿತ್ಯಪ್ರಿಯರಿಗೆ ವಚನಾಸ್ವಾಧನೆಯನ್ನು ಉಂಟುಮಾಡುವ ಅತ್ಯುತ್ತಮ ಪುಸ್ತಕವಾಗಿದೆ.
ಒಟ್ಟು 622 ಪುಟಗಳನ್ನು ಹೊಂದಿರುವ ಈ ಕೃತಿಯನ್ನು ಮೈಸೂರಿನ ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ ಹೊರತಂದಿದ್ದು ಇದರ ಮುಖಬೆಲೆ ರೂ 300. ಪುಸ್ತಕ ಬೇಕಾದರೆ ಕೆಳಗಿನ ನಂಬರ್ ಗೆ ವಾಟ್ಸ್ ಆ್ಯಪ್ ಮಾಡಿ.
9980393469
ಪುಸ್ತಕ ಪರಿಚಯಿಸುತ್ತಿರುವವರು
ಡಾ. ವಚನ ಕುಮಾರಸ್ವಾಮಿ
ಸಂಸ್ಥಾಪಕರು
ಶರಣು ವಿಶ್ವವಚನ ಫೌಂಡೇಷನ್, ಮೈಸೂರು


No comments:
Post a Comment