ವಚನ ಕುಮಾರಸ್ವಾಮಿ, ಸಂಸ್ಥಾಪಕರು, ಶರಣು ವಿಶ್ವವಚನ ಫೌಂಡೇಷನ್, ಮೈಸೂರು
ಇವರ ಮೊದಲ ಹೆಸರು ಕುಮಾರಸ್ವಾಮಿ, ಇವರು ವಚನಗಳ ಬಗ್ಗೆ ಹೊಂದಿರುವ ಪ್ರೀತಿ ಹಾಗೂ ವಚನ ಪ್ರಸಾರಕ್ಕೆ ಕೈಗೊಂಡಿರುವ ಚಟುವಟಿಕೆಗಳಿಂದ ವಚನ ಕುಮಾರಸ್ವಾಮಿ ಎಂದೇ ಚಿರಪರಿಚಿತರಾಗಿದ್ದಾರೆ.
ಜನನ : 1978 ಆಗಸ್ಟ್ 27ರಂದು ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕು ಚಾಮನಹಳ್ಳಿಹುಂಡಿ ಎಂಬ ಕುಗ್ರಾಮದಲ್ಲಿ ಜನಿಸಿದರು. ತಂದೆ : ಸಿ.ಪಿ.ಸಿದ್ದಲಿಂಗಪ್ಪ. ತಾಯಿ: ದೇವಮ್ಮ. ಪತ್ನಿ : ರೂಪ ಕುಮಾರಸ್ವಾಮಿ. ಮಕ್ಕಳು: ಸಿ.ಕೆ ಗಿರಿಜೇಶ್, ಸಿ.ಕೆ ವಚನ
ವಿದ್ಯಾಭ್ಯಾಸ
·ಪ್ರಾಥಮಿಕ ವಿದ್ಯಾಭ್ಯಾಸ- ಸ.ಹಿ.ಪ್ರಾ.ಶಾಲೆ, ಚಾಮನಹಳ್ಳಿಹುಂಡಿ
·ಮಾಧ್ಯಮಿಕ ವಿದ್ಯಾಭ್ಯಾಸ- ಸ.ಹಿ.ಪ್ರಾ.ಶಾಲೆ ಚಿಕ್ಕೆರೆಯೂರು
·ಪ್ರೌಢಶಾಲೆ – ಸೈಂಟ್ ಮೇರಿಸ್ ಪ್ರೌಢಶಾಲೆ, ಎಚ್.ಡಿ.ಕೋಟೆ
·ಪಿ.ಯು.ಸಿ - ಮರಿಮಲ್ಲಪ್ಪ ವಿದ್ಯಾಸಂಸ್ಥೆ, ಮೈಸೂರು
·ಪದವಿ – ವಿಶ್ವವಿದ್ಯಾನಿಲಯ ಸಂಜೆ ಕಾಲೇಜು, ಮೈಸೂರು
·ಟಿ.ಸಿ.ಎಚ್- ವಸಂತಮಹಲ್, ಮೈಸೂರು
ಬಿ.ಎಡ್ – ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು
*ಸ್ನಾತಕೋತ್ತರಪದವಿ - ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು
ಹಾಗೂ ಕನ್ನಡ ವಿಷಯದಲ್ಲಿ ಎನ್.ಇ.ಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ.
ವೃತ್ತಿ
·ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಅವರ ಹುಟ್ಟೂರಾದ ಚಾಮನಹಳ್ಳಿಹುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕ ವೃತ್ತಿಗೆ ಪಾದಾರ್ಪಣೆ
·ವಿದ್ಯಾಭ್ಯಾಸ ಮಾಡಿದ ಮಾಧ್ಯಮಿಕ ಶಾಲೆಯಾದ ಸ.ಹಿ.ಪ್ರಾ.ಶಾಲೆ ಚಿಕ್ಕರೆಯೂರಿನಲ್ಲಿ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಣೆ
·ನಂತರ ಮೈಸೂರು ಉತ್ತರವಲಯದ ಕ್ಷೇತ್ರಸಂಪನ್ಮೂಲಸಮನ್ವಯಾಧಿಕಾರಿಗಳವರ ಕಛೇರಿಯಲ್ಲಿ ಕ್ಷೇತ್ರಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.
-ಪ್ರಸ್ತುತ ಸ.ಹಿ.ಪ್ರಾ.ಶಾಲೆ, ಕೆ. ಹೆಮ್ಮನಹಳ್ಳಿ, ಮೈಸೂರು ತಾ. ಇಲ್ಲಿ ಶಿಕ್ಷಕರಾಗಿ ಕರ್ತವ್ಯ ನಿವಹಿಸುತ್ತಿದ್ದಾರೆ.
ಪ್ರವೃತ್ತಿ
·ಕವಿತೆ ರಚನೆ, ವಚನ ವಾಚನ, ವಚನ ತಾತ್ಪರ್ಯ, ಉಪನ್ಯಾಸ ನೀಡುವುದು. ಶರಣರ ಸಾಕ್ಷ್ಯಚಿತ್ರಗಳ ನಿರ್ಮಾಣ, ಶರಣರ ಜೀವನ ಚರಿತ್ರೆ ಪುಸ್ತಕಗಳ ರಚನೆ, ಶರಣ ಕ್ಷೇತ್ರಗಳ ಭೇಟಿ.
ಶರಣು ವಿಶ್ವವಚನ ಫೌಂಡೇಷನ್ ಸ್ಥಾಪನೆ
2016ರಲ್ಲಿ ವಚನ ಪ್ರಸಾರಕ್ಕೆ ಶರಣು ವಿಶ್ವವಚನ ಫೌಂಡೇಷನ್ ಎಂಬ ಅಂತರರಾಷ್ಟ್ರೀಯ ಸಂಸ್ಥೆ ಸ್ಥಾಪಿಸಿ
ಅದರ ಮುಖಾಂತರ 15 ದೇಶ ಮತ್ತು 10 ರಾಜ್ಯಗಳಿಗೆ ವಾಟ್ಸ್ ಆ್ಯಪ್ ಮುಖಾಂತರ 1 ಲಕ್ಷಕ್ಕೂ ಹೆಚ್ಚು
ಜನರಿಗೆ ವಚನ ಪ್ರಸಾರ ಮಾಡುತ್ತಿದ್ದಾರೆ. ಅಲ್ಲದೇ ಶಾಲೆಗಳೆಡೆಗೆ ವಚನಗಳ ನಡಿಗೆ, ವಚನಗಳ ನಡಿಗೆ
ವಿದ್ಯಾರ್ಥಿನಿಲಯಗಳೆಡೆಗೆ ವಚನಗಳ ನಡಿಗೆ, ಕಾಲೇಜಿನೆಡೆಗೆ ವಚನಗಳ ನಡಿಗೆ, ವಿಶ್ವವಿದ್ಯಾನಿಲಯಗಳೆಡೆಗೆ, ಅನಾಥಾಶ್ರಮಗಳೆಡೆಗೆ ವಚನಗಳ ನಡಿಗೆ, ವೃದ್ಧಾಶ್ರಮಗಳೆಡೆಗೆ ವಚನಗಳ ನಡಿಗೆ ಹಾಗೂ ವಚನಗ್ರಾಮಗಳ ಮುಖಾಂತರ ವಚನಪ್ರಸಾರ ಮಾಡುತ್ತಿದ್ದಾರೆ.
ಹಸಿವು ಮುಕ್ತ ಸಮಾಜಕ್ಕಾಗಿ ನಮ್ಮ ಚಿತ್ತ
ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಕೊಡಗು ಹಾಗೂ ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ
ತೊಂದರೆಗೊಳಗಾದ ಜನರಿಗೆ ಹಾಗೂ ಕೋವಿಡ್ ಪರಿಣಾಮ ಸಂಕಷ್ಟದಲ್ಲಿರುವ ಜನರಿಗೆ ಆಹಾರ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಿ ಹಸಿವು ಮುಕ್ತ ಸಮಾಜಕ್ಕಾಗಿ ಶ್ರಮಿಸುತ್ತಿದ್ದಾರೆ
ಸಸ್ಯೋತ್ಸವ
ರೈತರ ಜಮೀನಿಗೆ ಹೋಗ ಹಣ್ಣಿನ ಗಿಡ ನೆಟ್ಟು ಅವುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ರೈತರಿಗೆ ತಿಳಿಸಿ ಪರಿಸರಸಂರಕ್ಷಣೆಗೆ ನೂತನ ರೀತಿಯ ಹೆಜ್ಜೆ ಹಾಕಿರುತ್ತಾರೆ
https://youtu.be/Vm_aSfuxpRo
*ಆ್ಯಪ್*
*ಸಿದ್ಧಗಂಗಾ ದಿವ್ಯ ತಪೋನಿಧಿ ವಿಶ್ವವಚನ ಆ್ಯಪ್*
ಪೂಜ್ಯ ಶ್ರೀ ಡಾ. ಶಿವಕುಮಾರಮಹಾಸ್ವಾಮಿಗಳವರ ಬಗ್ಗೆ ಪೂಜ್ಯರಿಂದ ಮತ್ತು ಭಕ್ತರಿಂದ ಅನಿಸಿಕೆ ಒಳಗೊಂಡ ಆ್ಯಪ್
ಸಾಕ್ಷ್ಯಚಿತ್ರ ನಿರ್ಮಾಣ
ಶ್ರೀ ಗುರುಮಲ್ಲೇಶ್ವರರ ಜೀವನ ದರ್ಶನ
ಗದ್ಧಿಗೆಯ ಸದ್ಗುರು ಶ್ರೀ ಕೆಂಡಗಣ್ಣಸ್ವಾಮಿ
ಯುಗಪ್ರವರ್ತಕ ಬಸವಣ್ಣ ಆಂಗ್ಲ ಭಾಷೆಯಲ್ಲಿ (THE PIONEER OF THE ERA - BASAVANNA)
ಶ್ರೀ ಮಲೆ ಮಹದೇಶ್ವರ
ನಿರ್ಮಾಣ ಹಂತದಲ್ಲಿ
ಅಲ್ಲಮಪ್ರಭು
ಅಕ್ಕ ನಾಗಲಾಂಬಿಕೆ
ಜಗನ್ಮಾತೆ ಅಕ್ಕಮಹಾದೇವಿ
ವಿವಿಧ ಕಾರ್ಯಕ್ರಮಗಳು
· ಚಂದನವಾಹಿನಿಯಲ್ಲಿ ಜೀವನ ದರ್ಶನ ಎಂಬ ಲೈವ್ ಪ್ರೋಗ್ರಾಂ
1. https://youtu.be/KK_CJHeffYA
2. https://youtu.be/r5qJj35kbtY
ನಿವ್ಸ್ 1 ಕನ್ನಡವಾಹಿನಿಯಲ್ಲಿ ಪ್ರತಿದಿನ ವಚನಸಾರ ಕಾರ್ಯಕ್ರಮ ಭಿತ್ತರ
https://www.youtube.com/playlist?list=PLCR1-sYQLBYnJjGI8JQcvSm9PHn4F4MVj
·ಯಶ್ ಟೆಲ್ ಟಿ ವಿ ಯಲ್ಲಿ ಡಿಬೆಟ್ ನಲ್ಲಿ ಭಾಗವಹಿಸುವಿಕೆ
https://youtu.be/0IizNXc5eL4
·ಸಿರಿ ಟಿವಿಯಲ್ಲಿ ಸಾಧಕರ ಹೆಜ್ಜೆ ಎಂಬ ಕಾರ್ಯಕ್ರಮದಲ್ಲಿ ಸಾಧಕರಾಗಿ ಭಾಗವಹಿಸುವಿಕೆ
https://youtu.be/rhtI8ZEEKzY
·ಬಸವ ಟಿ ವಿಯಲ್ಲಿ ಉಪನ್ಯಾಸ
·ಮಂಡ್ಯದ ಡೈಮಂಡ್ ಕನ್ನಡ ವಾಹಿನಿಯಲ್ಲಿ ಸಾಧಕರ ಸಿಪಾಯಿಯಾಗಿ ಭಾಗವಹಿಸುವಿಕೆ
https://youtu.be/N3KSsJovdjA
·93.5 ಎಫ್ ಎಂ ಚಾನಲ್ ನಲ್ಲಿ ರೆಡ್ ರಿವೈಂಡ್ ಪ್ರೋಗ್ರಾಂನಲ್ಲಿ ಲೈಪ್ ರಿವೈಂಡ್ ಮಾಡಿರುತ್ತಾರೆ.
https://youtu.be/PsX0baEJ7fo
·ಜನಧ್ವನಿ ಸರಗೂರು ಇಲ್ಲಿ 1000 ಕ್ಕೂ ಹೆಚ್ಚು ವಚನಾಮೃತ ಕಾರ್ಯಕ್ರಮವನ್ನು ಪತ್ನಿಯೊಡಗೂಡಿ ನೀಡಿರುತ್ತಾರೆ. ಅಲ್ಲದೇ ಇನ್ನೂರಕ್ಕೂ ಹೆಚ್ಚು ಶರಣರ ಪರಿಚಯವನ್ನು ಮಾಡಿರುತ್ತಾರೆ.
*ವಚನ ಸಾಹಿತ್ಯ ಮತ್ತು ಇತರೆ ವಿಷಯಗಳಿಗೆ ಸಂಬಂಧಿಸಿದಂತೆ 1000 ಕ್ಕೂ ಹೆಚ್ಚು ಉಪನ್ಯಾಸ ನೀಡಿರುತ್ತಾರೆ.
ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ
ಕೋವಿಡ್ 19 ಸಂದರ್ಭದಲ್ಲಿಯೂ ಅಂತರ್ಜಾಲದ ವಿವಿಧ ಮಾಧ್ಯಮಗಳ ಮುಖಾಂತರ ಪ್ರತೀ ಭಾನುವಾರ ವಿವಿಧ ಮಠದ ಶ್ರೀಗಳು ಹಾಗೂ ವಚನ ಸಾಹಿತ್ಯದ ಬಗ್ಗೆ ಪರಿಣಿತಿ ಹೊಂದಿರುವ ವ್ಯಕ್ತಿಗಳಿಂದ ಶರಣ ಸಾಹಿತ್ಯ ವಿಷಯಕ್ಕೆ ಸಂಬಂಧಿಸಿದಂತೆ ಪ್ರವಚನ ಏರ್ಪಡಿಸಿ ಮನೆಯಲ್ಲಿಯೇ ಜ್ಞಾನ ಪಡೆದುಕೊಳ್ಳಲು ಕಾರಣರಾಗಿದ್ದಾರೆ. ಇದುವರೆಗೆ 49 ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನಗಳು ನಡೆದಿರುತ್ತವೆ.
https://sharanuvishwa.blogspot.com/2020/08/blog-post_31.html
ಅಂತರರಾಷ್ಟ್ರೀಯ ಅಂತರ್ಜಾಲ ವಚನ ಮಾಧುರ್ಯ
ಪ್ರತೀ ಗುರುವಾರ ಮಹಿಳೆಯರಿಂದ, ಖ್ಯಾತ ಗಾಯಕರಿಂದ, ಮಕ್ಕಳಿಂದ, ವಿಶೇಷ ಚೇತನರಿಂದ, ಮೂರು ತಲೆಮಾರಿನವರಿಂದ, ದಂಪತಿಗಳಿಂದ, ಶಿಕ್ಷಕರಿಂದ , ವಿದೇಶದಲ್ಲಿರುವ ಕನ್ನಡಿಗರಿಂದ ವಚನಗಾಯನ ಏರ್ಪಡಿಸಿ ವಚನದ ಕಂಪನ್ನು ವಿವಿಧ ಆಯಾಮಗಳ ಮೂಲಕ ಹರಡಲು ಕಾರಣರಾಗಿದ್ದಾರೆ. ಇದುವರೆಗೆ 45 ವಚನ ಮಾಧುರ್ಯ ಕಾರ್ಯಕ್ರಮಗಳು ನಡೆದಿರುತ್ತವೆ. https://sharanuvishwa.blogspot.com/2020/08/blog-post_2.html
ಕೃತಿಗಳು
·ನೂರೊಂದು ವಚನಕಾರರ ನೂರೊಂದು ವಚನಗಳು
·ಬಸವಣ್ಣನವರ ನೂರೊಂದು ವಚನಗಳು
·ವಚನ ಕಲ್ಯಾಣ
·ವಚನಸಾರ
*ವಚನಾಮೃತ
*ನಿಜಸುಖಿ ಹಡಪದ ಅಪ್ಪಣ್ಣ
*ವಚನಭಾರತ
*ಗುರುಕರುಣ ತ್ರಿವಿಧಿ ಮತ್ತು ವಚನಗಳು
*ಶರಣ ಸೌರಭ(ಬಸವಯುಗದ ವಚನಕಾರರ ಪರಿಚಯ)
*ಕೋಟಿಗೊಬ್ಬ ಶರಣ(ಕವನ ಸಂಕಲನ)
*ವಚನ ಕಥಾ ಪ್ರಪಂಚ
*ವಿಜಯ ದೀಪ
*ವಚನ ಶಾಲೆ
*ವಚನ ದೀಪ
*ದಿವ್ಯ ಪ್ರಸಾದ
ಶರಣು ದಿನಚರಿ ( 2016 ರಿಂದ 2025 ರವರೆಗೆ 10 ದಿನಚರಿಗಳು)
ಪ್ರಶಸ್ತಿಗಳು
ಗ್ಲೋಬಲ್ ಪೀಸ್ ಯುನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ
.ರಾಜ್ಯದ ಹೆಸರಾಂತ ಮಠ ಶ್ರೀ ಸಿದ್ಧಗಂಗಾ ಮಠದ ವತಿಯಿಂದ ಸಂಘಸಿರಿ ಪ್ರಶಸ್ತಿ
.ಬೆಂಗಳೂರು ಬಸವ ಸಮಿತಿ ವತಿಯಿಂದ ಬಸವಭೂಷಣ ಪ್ರಶಸ್ತಿ
·ತಾಲ್ಲೂಕು ಉತ್ತಮ ಮಟ್ಟದ ಶಿಕ್ಷಕ ಪ್ರಶಸ್ತಿ – ಶಿಕ್ಷಣ ಇಲಾಖೆ
· ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ – ಶಿಕ್ಷಣ ಇಲಾಖೆ
·ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ – ಕರ್ನಾಟಕ ಕಾವಲುಪಡೆ
·ಉತ್ತಮ ಮುಖ್ಯಶಿಕ್ಷಕ ಪ್ರಶಸ್ತಿ – ಎಸ್.ಡಿ.ಎಂ.ಸಿ
·ವಚನ ಸಿರಿ ಮುಕುಟ – ಚುಟುಕು ಸಾಹಿತ್ಯ ಪರಿಷತ್ತು
·ಕಾಯಕರತ್ನ - ದಾರಿದೀಪ ಪತ್ರಿಕೆ, ಪಿರಿಯಾಪಟ್ಟಣ
·ಶರಣ ಜ್ಞಾನರತ್ನ – ರಾಷ್ಟ್ರೀಯ ಬಸವದಳ, ಬೆಂಗಳೂರು
.ಮುರುಘಾ ಚೇತನ – ಶ್ರೀ ಮುರುಘಾ ರಾಜೇಂದ್ರ ಮಹಾಸಂಸ್ಥಾನ ಶ್ರೀಮಠ, ಮರಿಯಾಲ, ಚಾಮರಾಜನಗರ ಜಿಲ್ಲೆ
*ಮೈಸೂರು ಬಸವಸಮಿತಿ ವತಿಯಿಂದ ಬಸವಶ್ರೀ ಪ್ರಶಸ್ತಿ
*ಮಂಡ್ಯದ ಹಲ್ಲೇಗೆರೆ ಅಮ್ಮಯಮ್ಮ ದುರ್ಗೇಗೌಡ ಪ್ರತಿಷ್ಠಾನ ವತಿಯಿಂದ ವಚನರತ್ನ ಪ್ರಶಸ್ತಿ
.ಕಾಯಕಯೋಗಿ ಪ್ರಶಸ್ತಿ – ಶ್ರೀ ಹೊಸಮಠ, ಸರಗೂರು, ಮಳವಳ್ಳಿ ತಾ. ಮಂಡ್ಯ ಜಿಲ್ಲೆ.
ಅಲ್ಲಮಶ್ರೀ ಪ್ರಶಸ್ತಿ - ಶಿವಮೊಗ್ಗ ಜಿಲ್ಲೆ ಹರಮಘಟ್ಟ ಶ್ರೀಬಸವೇಶ್ವರ ಬಳಗ
ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಮಂಡ್ಯದ ವತಿಯಿಂದ ವಿವೇಕಶ್ರೀ ಪ್ರಶಸ್ತಿ
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಭಿನಂದನೆ
· ಹೆಗ್ಗಡದೇವನಕೋಟೆ ಲಯನ್ಸ್ ಸಂಸ್ಥೆಯಿಂದ ಅಭಿನಂದನೆ
·ಬೆಮೆಲ್ ಬಸವಸಮಿತಿ, ಬೆಂಗಳೂರು ಇವರಿಂದ ಅಭಿನಂದನೆ
· 100 ಕ್ಕೂ ಹೆಚ್ಚು ಸಂಘಸಂಸ್ಥೆಗಳಿಂದ ಗೌರವ ಸನ್ಮಾನ




















































