Wednesday, August 31, 2022

ಗಣಪತಿ ಇತಿಹಾಸ

 *ತಿರುಚಿದ ಇತಿಹಾಸ*


ಮಗುವಿನ ದೇಹಕ್ಕೆ 100 ಕೆಜಿಯಷ್ಟಿರಬಹುದಾದ ಆನೆಯ ತಲೆಯನ್ನು ಜೋಡಿಸಲು ಸಾಧ್ಯವೆ ? 


ನಿಜವಾದ ಇತಿಹಾಸ ಯಾವುದು ?

ಇಲ್ಲಿದೆ ಐತಿಹಾಸಿಕ ಸಾಕ್ಷಿಗಳು


ಶಾಕ್ಯ ಕುಲದ ಸಂಕೇತ ಆನೆಯಾಗಿತ್ತು.  

ಶಾಕ್ಯರ ಗಣರಾಜ್ಯಕ್ಕೆ ಬುದ್ಧನ ತಂದೆ ಶುದ್ಧೋಧನ  ಗಣಪತಿ(ಅಧಿಪತಿ) ಆಗಿದ್ದ.


ಶುದ್ಧೋಧನನ ನಂತರ,ಅವನ ಮಗ  ಸಿದ್ಧಾರ್ಥ ಗೌತಮನು ಗಣಾಧಿಪತಿ ಆಗಬೇಕಿತ್ತು.

 

ಅದರ ಸೂಚ್ಯವಾಗಿ ಶಾಕ್ಯ ಗಣದ ಜನರು  ಸಿದ್ಧಾರ್ಥ ಗೌತಮನನ್ನು ಗಣಾಧಿಪತಿ, *ಗಣಪತಿ* ಈ ಹೆಸರಿನಲ್ಲಿ ಕರೆಯುತ್ತಿದ್ದರು.


ಶಾಕ್ಯ ಗಣವು ಅಂದಿನ "ಕೋಸಲ" ಸಾಮ್ರಾಜ್ಯದ ಅಧೀನ ಗಣರಾಜ್ಯವಾಗಿತ್ತು. ಶಾಕ್ಯರ ಸಂಕೇತ ಆನೆಯನ್ನೇ ಕೋಸಲವೂ ತನ್ನ ಸಂಕೇತವನ್ನಾಗಿ ಮಾಡಿಕೊಂಡಿತು.  

ಕೋಸಲ ಸಾಮ್ರಾಜ್ಯವನ್ನು  "ಮತಂಗ"ರು ಹಾಗೂ ಅಂದಿನ "ಕೋಸಲ"ಕ್ಕೆ  ಸಮಕಾಲೀನವಾಗಿ ಅಸ್ತಿತ್ವದಲ್ಲಿದ್ದ  "ಮಗಧ" ಸಾಮ್ರಾಜ್ಯಕ್ಕೆ  "ನಾಗ"ರು ಅಧಿಪತಿಗಳು  ಆಗಿದ್ದರು. 

ಮಗಧಕ್ಕೆ "ನಾಗರಹಾವು" ಸಂಕೇತವಾಗಿತ್ತು. 

ಮತಂಗ ಹಾಗೂ ನಾಗರ ಮಧ್ಯೆ ವಿವಾಹ ಸಂಬಂಧವೂ ಏರ್ಪಟ್ಟಿತ್ತು.  ಕೋಸಲದ ಪಸೇನದಿ ಹಾಗೂ ಮಗಧದ ಬಿಂಬಸಾರನು ಇವರಿಬ್ಬರೂ ತಮ್ಮ ಎರಡೂ ಸಾಮ್ರಾಜ್ಯ ಗಳಲ್ಲಿ ಪರಸ್ಪರ ಕೊಡುಕೊಳ್ಳುವಿಕೆ ಸಂಬಂಧವನ್ನು ಬೆಳೆಸಿದ್ದರು. ಮಗಧವು ಕಾಲಾನಂತರ ಚಂದ್ರಗುಪ್ತ ಮೌರ್ಯನ ನೇತೃತ್ವದಲ್ಲಿ  ಮೌರ್ಯ ಸಾಮ್ರಾಜ್ಯವಾಗಿ ಇಡೀ ಭಾರತದ ಬಹುಭಾಗವನ್ನು ತನ್ನ ಆಳ್ವಿಕೆಯ ತೆಕ್ಕೆಗೆ ಒಳಪಡಿಸಿತು.  

ಮೌರ್ಯ ಸಾಮ್ರಾಜ್ಯದ ಕೊನೆಯ ದೊರೆ ಬೃಹದ್ರತ ಮೌರ್ಯನ ಸೇನಾಧಿಪತಿಯಾಗಿ, ಆರ್ಯರ  ಪುಷ್ಯಮಿತ್ರ ಶುಂಗನು ನೇಮಕವಾಗಿದ್ದನು. ಹೀಗೆಯೇ ಒಂದು ದಿನ ದುರ್ಬಲನಾದ ಬೃಹದ್ರತ ಮೌರ್ಯನನ್ನು, ಪುಷ್ಯಮಿತ್ರನು  ಮೋಸದಿಂದ ಕೊಂದನು. ಅಂದಿಗೆ ಮೌರ್ಯರ ಸಾಮ್ರಾಜ್ಯ ಪತನವಾಯಿತು. ಹೀಗೆ ಪತನಗೊಂಡ ಮೌರ್ಯರ ಆಡಳಿತವನ್ನು  ಪುಷ್ಯಮಿತ್ರಶುಂಗ ತನ್ನ ತೆಕ್ಕೆಗೆ ತಂದುಕೊಂಡನು. ಆರ್ಯರ ನೇತೃತ್ವದ ಶುಂಗ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂದಿತು. 

ಶುಂಗರು ಆಡಳಿತಕ್ಕೆ ಬಂದ ತಕ್ಷಣವೇ ಅಂದು ಎಲ್ಲಾ ಕಡೆ ಇದ್ದ ಬೌದ್ಧ ವಿಹಾರಗಳನ್ನು, ಬೌದ್ಧ ಸ್ಮಾರಕಗಳನ್ನು ನಾಶಮಾಡಿದ್ದಲ್ಲದೆ ಬೌದ್ಧ ಬಿಕ್ಕುಗಳ ಮಾರಣಹೋಮ ನೆಡೆಸಲಾಯಿತು. ಇವೆಲ್ಲದರ ನಂತರ ಈ ದೇಶದ ಮೂಲನಿವಾಸಿಗಳ ಸಾಂಸ್ಕೃತಿಕ ಕುರುಹುಗಳನ್ನು ಆರ್ಯೀಕರಣ ಮಾಡಲಾಯಿತು. ಆ ರೀತಿ ಆರ್ಯೀಕರಣ ಗೊಂಡವನೇ ಇಂದು ಭಾರತದಲ್ಲಿ ಆಚರಣೆ ಮಾಡುತ್ತಿರುವ " *ಗಣಪತಿ ಪ್ರತಿಷ್ಠಾಪನೆ* ". 


ಗಣಪತಿಯ ಮುಖವು ಆನೆ. ಆನೆಯು ಪ್ರಾಚೀನ ಮತಂಗ(ಶಾಕ್ಯ ಗಣದ) ಸಾಮ್ರಾಜ್ಯದ ಸಂಕೇತ.

 

ಗಣಪತಿ ಹೊಟ್ಟೆಗೆ ಸುತ್ತಿರುವ 

"ನಾಗರ ಹಾವು" ಅಂದಿನ ನಾಗ ಸಾಮ್ರಾಜ್ಯದ ಸಂಕೇತ.

 

ಗಣಪತಿ ಬೊಪ್ಪ ಮೋರಿಯಾ!

ಅನ್ನುವ ಘೋಷಣೆ "ಮೌರ್ಯ" ಸಾಮ್ರಾಜ್ಯದ ತದ್ಭವ ಪದ.


ಹೀಗೆ ಅಂದಿನ ನಮ್ಮ(ಮೂಲನಿವಾಸಿಗಳ) ಸಾಂಸ್ಕೃತಿಕ ಪರಂಪರೆಯ ಕುರುಹುಗಳ ಮೂಲವನ್ನು ನಾಶಪಡಿಸಿದ ಸಂಕೇತವೇ...ಇಂದು ನಾವು ಮತ್ತು ನೀವೆಲ್ಲಾ  ಈ ದಿನ ಆಚರಣೆ ಮಾಡುತ್ತಿರುವ.....

"ಗಣೇಶನ ಹಬ್ಬ".


*ಇಷ್ಟೆಲ್ಲಾ ಸಂಭವಿಸಿದ್ದನ್ನೂ ತಿಳಿದೂ ನಮ್ಮ ಮತ್ತು ನಿಮ್ಮ ಮಕ್ಕಳು ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯ ನೆಪದಲ್ಲಿ ನೆಡೆಸುತ್ತಿರುವ ಸಿಡಿ ಮದ್ದು, ಕರ್ಕಶ ಸಂಗೀತ  ಹಾಗೂ ಅಶ್ಲೀಲ ಹಾಡುಗಳನ್ನು ಒಳಗೊಂಡ ಮೆರವಣಿಗೆಯಲ್ಲಿ ಕುಡಿದು ಉನ್ಮಾದದಿಂದ ಕುಣಿಯುತ್ತಾ ಭಾಗವಹಿಸುತ್ತಿರುವುದು ಸರಿಯೇ* ಯೋಚಿಸಿ..ತೀರ್ಮಾನಿಸಿ....

Tuesday, August 30, 2022

ಗಣಪತಿ ಮತ್ತು ಅಕ್ಕಮಹಾದೇವಿ

 ಮಾತೃತ್ವ


ಮಣ್ಣಿನ ಗೊಂಬೆ ಮಾಡಿ ಅದಕ್ಕೆ ಜೀವತುಂಬಿ ಅದನ್ನು ಕಾವಲು ಇಟ್ಟ ಪಾರ್ವತಿಯನ್ನ ನಾವು ಜಗಜ್ಜನನಿ ಎಂದೇ ಕರೆಯುತ್ತೇವೆ

ಶಿವ ಬಂದು ಆ ಮಣ್ಣಿನ ಗೊಂಬೆಯನ್ನು ಕತ್ತರಿಸಿದಾಗ ಮಣ್ಣಿನಿಂದ ಸೃಷ್ಠಿಸಿದ ಜಗನ್ಮಾತೃಯಾದ ಪಾರ್ವತಿ ಅಥವಾ ಗೌರಿಗೆ ದುಖಃ ಆಗುತ್ತದೆ

ಹೆಂಡತಿಯ ದುಖಃ ಶಮನ ಮಾಡಲು ಶಿವ ಆನೆಯ ಮರಿಯ ತಲೆ ಕಡಿದು ಆ ಮಣ್ಣಿನ ಗೊಂಬೆಯ ದೇಹಕ್ಕೆ ಜೋಡಿಸಿ ಜೀವ ತುಂಬಿದಾಗ ಗೌರಿಗೆ ಸಂತೋಷ ಉಂಟಾಗುತ್ತದೆ 


ಇಲ್ಲಿ ಒಂದು ಪ್ರಶ್ನೆ ಜಗಜ್ಜನನಿ ಆದ ಗೌರಿಗೆ ಮಣ್ಣಿನ ಗೊಂಬೆ ಸತ್ತದಕ್ಕೆ ದುಖಃ ಆಗುತ್ತದೆ 

ಆದರೆ ಇನ್ನೊಂದು ಆನೆಯ ಮರಿ ಸತ್ತರೆ ದುಖಃ ಆಗಲಿಲ್ಲ ಸಂತೋಷ ಆಯಿತು ಹಾಗಾದರೆ ಪಾರ್ವತಿ ಅಥವಾ ಗೌರಿಯ ಹೃದಯ ಮಾತೃ ಹೃದಯವೇ


ಈ ಕೆಳಗಿನ ವಚನವನ್ನು ಓದಿ


ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ, ಹಲವು ಪ್ರಾಣಿಯ ಕೊಂದು, ನಲಿನಲಿದಾಡುವ. ತನ್ನ ಮನೆಯಲೊಂದು ಶಿಶು ಸತ್ತಡೆ ಅದಕ್ಕೆ ಮರುಗುವಂತೆ ಅವಕೇಕೆ ಮರುಗ ? ಅದೆಂತೆಂದಡೆ 'ಸ್ವಾತ್ಮಾನಮಿತರಂ ಚೇತಿ ಭಿನ್ನತಾ ನೈವ ದೃಶ್ಯತಾಂ ಸರ್ವಂ ಚಿಜ್ಜ್ಯೋತಿರೇವೇತಿ ಯಃ ಪಶ್ಯತಿ ಸ ಪಶ್ಯತಿ' ಎಂದುದಾಗಿ, ಜಾಲಗಾರನ ದುಃಖ ಜಗಕೆಲ್ಲ ನಗೆಗೆಡೆ. ಇದು ಕಾರಣ, ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು ಜೀವಹಿಂಸೆ ಮಾಡುವ ಮಾದಿಗರನೇನೆಂಬೆನಯ್ಯಾ ?

-

ಅಕ್ಕಮಹಾದೇವಿ


ತಾಯಿ ಅಕ್ಕ ಮಹಾದೇವಿ ಅವರ ಹೃದಯ ಹೇಗೆ ಮಮ್ಮಲ ಮರುಗುತ್ತದೆ ಎಂದು 


ಜಾಲಗಾರನು ನೀರಿನಲ್ಲಿ ಹುಡುಕಾಡಿ ಹಲವು ಮೀನುಗಳನ್ನು ಹಿಡಿದು ಸಾಯಿಸಿ ಸಂತೋಷ ಪಡುತ್ತಾನೆ ಆದರೆ ತನ್ನ ಮನೆಯಲ್ಲಿ ಒಂದು ಶಿಸು ಸತ್ತರೂ ಸಹ ಗೋಳಾಡುತ್ತಾನೆ 

ಅವನ ದುಖಃ ಜಗಕ್ಕೆಲ್ಲ ನಗೆತರುವುದು ಎಂದಿದ್ದಾರೆ

ಹಾಗದರೆ ಪಾರ್ವತಿಯ ದುಖಃ ನಗೆಗೆಡೆ ಅಲ್ಲವೇ


ಶರಣು ಶರಣಾರ್ಥಿ


9945439171

Sunday, August 21, 2022

ಶಿಕ್ಷಕ ಶಿಷ್ಯ ಮನಮುಟ್ಟುವ ಕಥೆ

 #ನಿಮ್ಮ_ಆಲೋಚನಾ_ಶಕ್ತಿಯೇ_ನಿಮ್ಮ_ಸಂಪತ್ತು

 (ಮಹಾರಾಷ್ಟ್ರದ ಜಿಲ್ಲಾಧಿಕಾರಿ ಒಬ್ಬರ ಸತ್ಯ ಘಟನೆ)


ಒಂದು ಶಾಲೆಯಲ್ಲಿ ದಿನದ ಪಾಠಗಳು ನೆಡೆಯುತ್ತಿತ್ತು ಎಂದಿನಂತೆ.......ಹೊರಗೆ ಜೋರಾಗಿ ಮಳೆ ಬರುತ್ತಿತ್ತು,....4ನೇ ತರಗತಿಯಲ್ಲಿ ಪಾಠದ ಮದ್ಯ ಶಿಕ್ಷಕರೊಬ್ಬರು ತಮಾಷೆಗೆ ಮಕ್ಕಳನ್ನು ಕೇಳಿದರು - ನಿಮ್ಮೆಲ್ಲರಿಗೂ ನಾನು 100-100 ರೂಪಾಯಿ ಕೊಟ್ಟರೆ ನೀವೆಲ್ಲರೂ ಏನು ಖರೀದಿಸುತ್ತೀರಿ?


 ಒಬ್ಬ ವಿದ್ಯಾರ್ಥಿ ಹೇಳಿದ - ನಾನು ವಿಡಿಯೋ ಗೇಮ್‌ ಖರೀದಿಸುತ್ತೇನೆ..

ಇನ್ನೊಬ್ಬ ಹೇಳಿದ - ನಾನು ಕ್ರಿಕೆಟ್ ಬಾಲ್ ಖರೀದಿಸುತ್ತೇನೆ.

ಮತ್ತೊಬ್ಬ ಹೇಳಿದ- ನಾನು ಒಂದು ಮುದ್ದಾದ ಗೊಂಬೆಯನ್ನು ಖರೀದಿಸುತ್ತೇನೆ.

ಬೇರೆಯೊಬ್ಬ ಹೇಳಿದ - ನಾನು  ಚಾಕೊಲೇಟ್ಗಳನ್ನು ಖರೀದಿಸುತ್ತೇನೆ.


...ಆದರೆ..

 

ಒಂದು ಮಗು ಆಲೋಚನೆಯಲ್ಲಿ ಮುಳುಗಿತ್ತು....ಅದನ್ನು ಗಮನಿಸಿದ ಶಿಕ್ಷಕರು ಆ ಹುಡುಗನನ್ನು ಕೇಳಿದರು - ನೀನು ಏನು ಯೋಚಿಸುತ್ತಿದ್ದಿಯ ಮರಿ, ನೀನು ಏನು ಖರೀದಿಸುತ್ತೀಯಾ?


ಆ ಮಗು ಹೇಳಿತು - ಕನ್ನಡಕ ಖರೀದಿಸುವೇ!!

ಶಿಕ್ಷಕ-:ಕನ್ನಡಕನ....ಯಾಕೆ ನಿನಗೆ ಅದು?


ಆ ಹುಡುಗ ಹೇಳಿದ.....ಸಾರ್, ನನ್ನ ತಾಯಿಗೆ ಸ್ವಲ್ಪ  ದೃಷ್ಟಿ ಮಂಜು, ಸರಿಯಾಗಿ ಕಣ್ಣು ಕಾಣಿಸುವುದಿಲ್ಲ...ಆದ್ದರಿಂದ ನಾನು ನನ್ನ ತಾಯಿಗೆ ಕನ್ನಡಕವನ್ನು ಖರೀದಿಸುತ್ತೇನೆ!


 ಶಿಕ್ಷಕರು ಕೇಳಿದರು - ನಿನ್ನ ತಂದೆ ನಿನ್ನ ತಾಯಿಗೆ ಕನ್ನಡಕವನ್ನು ತಂದು ಕೊಡಬಹುದು..ಅವರತ್ರ ಹೇಳು... ನೀನು ನಿನಗಾಗಿ ಏನನ್ನೂ ಖರೀದಿಸಬೇಕಲ್ಲವೇ ಈ 100ರೂಪಾಯಿಯಲ್ಲಿ?


 ಮಗು ನೀಡಿದ ಉತ್ತರದಿಂದ ಶಿಕ್ಷಕರ ಕಣ್ಣು ತುಂಬಿಬಂತು..


 ಮಗು ಹೇಳಿತು - ನನ್ನ ತಂದೆ ಈಗ ಈ ಜಗತ್ತಿನಲ್ಲಿಲ್ಲ

 ನನ್ನ ತಾಯಿಯೇ ನನಗೆ ಎಲ್ಲ.....ನನ್ನ ತಾಯಿ ಊರ ಜನರ ಬಟ್ಟೆ ಹೊಲಿದು...ಬರುವ ಸಂಪಾದನೆಯಿಂದ..ನನಗೆ ಊಟ.. ನನಗೆ ಬಟ್ಟೆ...ಶಾಲೆಗೆ ಹೋಗಲು ಪುಸ್ತಕ ..ಪೆನ್ನು...ಕೊಡಿಸುತ್ತಳೇ....ಕೆಲವು ತಿಂಗಳುಗಳಿಂದ ಅವಳು ದೃಷ್ಟಿ ಹೀನತೆಯಿಂದ ಬಟ್ಟೆಯನ್ನು ಸರಿಯಾಗಿ ಹೊಲಿಯಲು ಪರದಡುತ್ತ ಇದ್ದಾಳೆ, ಅದಕ್ಕಾಗಿಯೇ ನಾನು ನನ್ನ ತಾಯಿಗೆ ಕನ್ನಡಕವನ್ನು ನೀಡುತ್ತೇನೆ....ಯಾಕ್ ಅಂದ್ರೆ...ನನ್ ಕೊಡಿಸುವ ಕನ್ನಡಕ್ಕದಿಂದ.... ನನ್ನ ತಾಯಿ... ನನ್ನನು ಚೆನ್ನಾಗಿ ಓದಿಸುತ್ತಳೇ ಅನ್ನೋ ನಂಬಿಕೆಯಿಂದ...ಮತ್ತು...ನನ್ನ ತಾಯಿಯ.ಸಹಾಯದಿಂದ....ನಾನು ಭವಿಷ್ಯದಲ್ಲಿ ದೊಡ್ಡ ವ್ಯಕ್ತಿ ಆದ್ರೂ ಆಗಬಹುದು.


 ಶಿಕ್ಷಕ -ಶಭಾಷ್ ಪುಟ್ಟ....ನಿನ್ನ ಆಲೋಚನೆಯೇ ನಿನ್ನ ಸಂಪಾದನೆ!  ತಗೋ ಈ 100 ರೂ. ನನ್ನ ಕೊಟ್ಟ ಭರವಸೆಯ ಮಾತಿನಂತೆ ಮತ್ತು ನಾನು ಇನ್ನು ಈ 200 ರೂ.ಗಳನ್ನು ಸಾಲವಾಗಿ ನೀಡುತ್ತಿದ್ದೇನೆ.  ನೀನು ದೊಡ್ಡ ವ್ಯಕಿಯಾಗಿ ಹಣ ಗಳಿಸಿದಾಗ ,ಆ 200ನ್ನು ಹಿಂತಿರುಗಿಸು....ನೀನು ಅಂತಹ ದೊಡ್ಡ ಮನುಷ್ಯನಾಗಬೇಕೆಂದು ನಾನು ಬಯಸುತ್ತೇನೆ...ಎನ್ನುತ್ತಾ....ಆ ವಿದ್ಯಾರ್ಥಿಯ ತಲೆಯ ಮೇಲೆ  ಕೈಯನ್ನು ಇಟ್ಟು ಆಶೀರ್ವದಿಸಿಸುತ್ತ 300 ಕೊಟ್ಟರು.


30 ವರ್ಷಗಳ ನಂತರ...........


 ಹೊರಗೆ ಮಳೆ ಬರುತ್ತಿದೆ, ಒಳಗೆ ತರಗತಿ ನಡೆಯುತ್ತಿದೆ!...ಅದೇ ಶಿಕ್ಷಕರು ಇನ್ನು ತನ್ನ ನಿವೃತ್ತಿಯ ಕಡೆಯ 3ತಿಂಗಳು ಎದುರುನೋಡುತ್ತ...ಯೋಚಿಸುತ್ತ...ಪಾಠ ಮಾಡುತ್ತಿದ್ದರು


 ಏಕಾಏಕಿ ಶಾಲೆಯ ಮುಂದೆ ಜಿಲ್ಲಾಧಿಕಾರಿಗಳ ಕೆಂಪು ಬಣ್ಣದ ದೀಪಾದ ಸೈರನ್ ಬತ್ತಿಯ ವಾಹನ ಬಂದು ನಿಂತಿತ್ತು..... ಶಾಲಾ ಸಿಬ್ಬಂದಿ ಅಲರ್ಟ್ ಆದರು....


 ಶಾಲೆಯಲ್ಲಿ ಮೌನ!

ಆದರೆ ಇದು ಏನು?


 ಜಿಲ್ಲಾಧಿಕಾರಿಯೊಬ್ಬರು ಮುದುಕ ಶಿಕ್ಷಕರ ಕಾಲಿಗೆ ಬಿದ್ದು ಹೇಳುತ್ತಾರೆ - ಸಾರ್, ನಾನು ಸಾಲವಾಗಿ ಪಡೆದ 200 ರೂಪಾಯಿಯನ್ನು ಹಿಂದಿರುಗಿಸಲು ಬಂದಿದ್ದೇನೆ!


 ಇಡೀ ಶಾಲೆಯ ಸಿಬ್ಬಂದಿ ಬೆಚ್ಚಿಬಿದ್ದರು!


 ಆ ವಯಸ್ಸಾದ ಶಿಕ್ಷಕ...ಕಾಲಿಗೆ ಬೀಳಲು ಬಾಗುತ್ತಿರುವ ಆ  ಯುವಕನ್ನು ಗುರುತಿಸಿ ಮೇಲೆ ಎತ್ತುತ್ತಾನೆ,ಅಪ್ಪಿಕೊಂಡು ತೋಳುಗಳಲ್ಲಿ ಅಳುತ್ತಾ ಹೇಳುತ್ತಾನೆ....ನನ್ನ ಶಿಕ್ಷಕ ವೃತ್ತಿ ಸಾರ್ಥಕವಾಯಿತು...✍️

 

ಕಾಲ ಬದಲಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ..ಚಕ್ರವರ್ತಿಯ ಮಗ ಫಕೀರನಾಗುತ್ತಾನೆ, ಮತ್ತು ಫಕೀರನ ಮಗ ಚಕ್ರವರ್ತಿಯಾಗುತ್ತಾನೆ.....ಒಳ್ಳೆಯ ಗುರು...ಒಳ್ಳೆಯ ಗುರಿ ಇರಬೇಕು ಅಷ್ಟೇ.......

(ಇಷ್ಟಾ ಆದ್ರೆ ಲೈಕ್ ..ಶೇರ್..ಮಾಡಿ ಪ್ರೋತ್ಸಾಹ ನೀಡಿ)


ಕಣ್ಣು ತೆರೆಸುವ ಕಥೆ

ಹಾಗೇ ಸುಮ್ಮನೆ 


ಈ ಕೆಳಗಿನ ಪುಟ್ಟ ಕಥೆಯನ್ನು ಓದಿ, ತಮ್ಮ ಅಭಿಪ್ರಾಯ ತಿಳಿಸಿ. 

ಐದಾರು ತಲೆಮಾರುಗಳ ಕುಟುಂಬದ ಕುಡಿಗಳೆಲ್ಲ ಕೂಡಿ ಇರುವ ಆ ಅವಿಭಕ್ತ ಕುಟುಂಬದ ಹಿರಿಯನಿಗೆ 93 ವರ್ಷ.


ಅದೊಂದು ದಿನ ಯಾವುದೋ ಕೌಟುಂಬಿಕ ವಿಷಯದಲ್ಲಿ ಮಾತು ಬೆಳೆದು, ಆ ಹಿರಿಯ ತನ್ನ 69 ವಯಸ್ಸಿನ ಮಗನನ್ನು ಆತನ ಮಕ್ಕಳು, ಮೊಮ್ಮಕ್ಕಳೆದುರೇ ಹೊಡೆದು ಬಿಡುತ್ತಾನೆ. ಆಗ ಮತ್ಯಾರು ಮಾತನಾಡಲು ಅಲ್ಲಿ ಏನೂ ಉಳಿದಿರುವುದಿಲ್ಲ. ಆವರೆಗೆ ಕಂಬಗಳ ಮರೆಯಲ್ಲಿ, ಬಾಗಿಲು ಕಿಟಿಕಿಯ ಹಿಂದೆ ನಿಂತು ನಡೆಯುವುದನ್ನು ಕದ್ದು ನೋಡುತ್ತಿದ್ದ ಹೆಂಗಸರು, ಚಿಕ್ಕವರೆಲ್ಲಾ ಒಳಗೆ ಸರಿದು ಬಿಡುತ್ತಾರೆ.


ಆ ರಾತ್ರಿ ತುಂಬಿದ ಇಡೀ ಮನೆಯಲ್ಲಿ ಮೌನ ಆವರಿಸಿದೆ. ಆ ಎರಡು ರೂಮಿನಲ್ಲಿರುವವರನ್ನು ಬಿಟ್ಟು.


ಹಿರಿಯನಿಗೆ ನಿದ್ದೆ ಬರುತ್ತಿಲ್ಲ. ಈ ಕಡೆಯಿಂದ ಆ ಕಡೆಗೆ, ಆ ಕಡೆಯಿಂದ ಈ ಕಡೆಗೆ ಆಗಾಗ ಮಗ್ಗಲು ಬದಲಿಸುತ್ತಿರುತ್ತಾನೆ. ಪಕ್ಕದಲ್ಲಿರುವ ಅಜ್ಜಿಗೆ ಯಜಮಾನ ಯಾವುದೋ ಚಿಂತೆಯಲ್ಲಿದ್ದಾನೆಂದು ಅನುಭವದಿಂದ ಗೊತ್ತಾಗುತ್ತಿದೆ, ಆದರೆ ಕೇಳಲು ಭಯ. ಕೊನೆಗೆ..


"ಯಾಕ್ರಿ? ನಿದ್ದಿ ಬರ್ತಿಲ್ಲೇನು? ನೀರೇನಾದ್ರೂ ಕೊಡ್ಲಾ?" ಕೇಳುತ್ತಾಳೆ..


"ಬ್ಯಾಡ" ಎಂದಷ್ಟೇ ಹೇಳಿ, ಸ್ವಲ್ಪ ಸಮಯದ ನಂತರ 


"ಆವಾಗ ನಿನ್ನ ಮಗನ ಮುಖ ನೋಡ್ದೇನು?" ಎನ್ನುತ್ತಾನೆ.


"ಹುಂ.." ಎಂದಷ್ಟೇ ಹೇಳುತ್ತಾಳೆ ಅಜ್ಜಿ..


"ಮೊದಲೆಲ್ಲಾ ಹೊಡದಾಗ ಅವ್ನ ಕಣ್ಣಾಗ ನೀರು ಬರ್ತಿರ್ಲಿಲ್ಲ, ಇವತ್ತು ಕಣ್ತುಂಬ ನೀರು ತುಂಬಿಕೊಂಡಿದ್ದ" ಅಂದ ಹಿರಿಯ, ಅದನ್ನಾಕೆಯೂ ಗಮನಿಸಿದ್ಲು..


"ನಾ ಜೋರಾಗಿ ಹೊಡ್ದನೇನೋ?, ಪೆಟ್ಟು ಜೋರಾಗಿ ಬಿತ್ತೇನೋ?" ಎಂದು ನೊಂದು ಕೊಂಡಿದ್ದ..


ಇನ್ನೊಂದು ರೂಮಿನಲ್ಲಿದ್ದ ಮಗನಿಗೂ ನಿದ್ದೆ ಬರುತ್ತಿಲ್ಲ. ಆತನಿಗೆ ನಿದ್ದೆ ಬರದೇ ಆತನ ಹೆಂಡತಿಗೂ ನಿದ್ದೆಯಿರಲಿಲ್ಲ. 


"ಮೊದ್ಲ್ಯಾವಾಗ್ಲೂ ಇಷ್ಟು ಮನಸಿಗೆ ಹಚ್ಗೊಳ್ಲಾರ್ದೊರು ಇವತ್ಯಾಕ ಬಾಳ ಬ್ಯಾಸರ ಮಾಡ್ಕೊಂಡೇರಿ?" ಎಂದು ಹೇಳುತ್ತಾ... "ದೊಡ್ಡೋರು ಮೊದ್ಲು ಎಷ್ಟು ಸಲ ಹೊಡದ್ರೂ ನಿಮ್ ಕಣ್ಣಾಗ ನೀರ ಬಂದಿದ್ದಿಲ್ಲ?" ಕಳಕಳಿಯಿಂದ ಕೇಳಿದಳು..


"ಅಪ್ಪ, ಹಿಂದಿನ ಸಲ ಹೊಡ್ದಾಗ ಪೆಟ್ಟು ಜೋರಾಗಿತ್ತು. ಈ ಸಲ ಹೊಡ್ದಂಗೆ ಅನ್ಸಲಿಲ್ಲ, ನಮ್ಮಪ್ಪನ ಕೈಯಾಗ ಶಕ್ತಿ ಕಡಿಮಿ ಆಗೇದ" ನೋವಿನಿಂದ ಹೇಳಿದಾತ.


"ಅಪ್ಪನ್ನ ಕಳ್ಕೊಂಡ್ರ ನಾವು ಪರದೇಶಿ ಆದಂಗಾಗ್ತೇವಿ, ಇನ್ಮ್ಯಾಲೆ ಅಪ್ಪನ್ನ ಇನ್ನೂ ಕಾಳಜಿಲಿಂದ ನೋಡ್ಕೋಬೇಕು" ಅಂದ..

- - - - - - - - - - - - - - - - - - - - - -

ಇಂಥಾ ಪವಿತ್ರ ಸಂಬಂಧಗಳು ಈಗ ಎಷ್ಟು ಹುಡುಕಿದರೂ ಸಿಗುವುದಿಲ್ಲ. ಕಳೆದುಕೊಂಡ ಮೇಲೆಯೇ ನಿಜವಾದ ಮೌಲ್ಯ ಗೊತ್ತಾಗೋದು, ಅಲ್ಲವೇ?


ಒಂದಿಷ್ಟು ಸಹನೆ, ಒಂಚೂರು ತ್ಯಾಗ ಬುದ್ಧಿ, ಸ್ವಲ್ಪ ಹೆಚ್ಚು ಪ್ರೀತಿ, .... ಎಂಥಾ ಪವಾಡ ಸೃಷ್ಟಿಸಬಲ್ಲವು, ಯೋಚಿಸಿ ನೋಡಿ. ಹೌದು, ನಾವು ಬದಲಾಗೋಣ.